Posts

ಮಹಾನುಭಾವ (ತೆಲುಗು)

Image
"ಮಾನಸಿಕ ಖಾಯಿಲೆ ಕುರಿತ ಸಿನೆಮಾ" ಶರೀರದಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಎಲ್ಲರೂ ಸಿನೆಮಾ ಮಾಡುತ್ತಾರೆ. ನಮ್ಮ ಹೀರೋಗಳೂ ಸಹ ಕಣ್ಣಿಲ್ಲದೇ, ಕಾಲಿಲ್ಲದೇ ಇರುವ ಹಾಗೆ ನಟಿಸಿ ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಆದರೆ ಮನಸ್ಸಿನಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಯಾರೂ ಜಾಸ್ತಿ ಬರೆದೂ ಇಲ್ಲ, ಸಿನೆಮಾ ಕೂಡಾ ಮಾಡಿಲ್ಲ. ಅಕಸ್ಮಾತ್ ಅಲ್ಲೊಂದು ಇಲ್ಲೊಂದು ಸಿನೆಮಾ ಮಾಡಿದ್ದರೂ, ಅದು ಮನಸ್ಸಿನ ಎಲ್ಲಾ ಖಾಯಿಲೆಗಳನ್ನು ಒಟ್ಟಿಗೆ ಸೇರಿಸಿ, ಅದಕ್ಕೆ ' ಹುಚ್ಚು' ಎಂಬ ಪಟ್ಟಿ ಕಟ್ಟಿ, ಹುಚ್ಚರೆಂದರೆ ಯಾವಾಗಲೂ ತಲೆ ಕೆದರಿಕೊಂಡು, ಬಟ್ಟೆ ಹರಿದುಕೊಂಡೇ ಇರುತ್ತಾರೆ, ತಮ್ಮನ್ನು ನೋಡಲು ಬಂದವರಿಗೆ ಕಚ್ಚುತ್ತಾರೆ ಎನ್ನುವ ತಪ್ಪು ಸಂದೇಶ ಕೊಡುವ ಚಿತ್ರಗಳೇ ಜಾಸ್ತಿ‌ ಇರುವುದು. ನಾಲ್ಕು ಜನರಲ್ಲಿ ಒಬ್ಬರಿಗೆ ಮನಸ್ಸಿನ ಖಾಯಿಲೆ ಇರುತ್ತದೆ ಅಂತ ಹೇಳುತ್ತದೆ ಮನಃಶಾಸ್ತ್ರ. ಅಲ್ಲದೇ ಮಾನಸಿಕ ಖಾಯಿಲೆಯ ಎಲ್ಲಾ ಲಕ್ಷಣಗಳೂ ಹುಚ್ಚೇ ಆಗಬೇಕೆಂದಿಲ್ಲ. ಅದರಲ್ಲಿ‌ ಕೆಲವು ಖಾಯಿಲೆಗಳು ಯಾರಿಗೂ ಹಾನಿ ಮಾಡದ, ಮೈಲ್ಡ್ ಖಾಯಿಲೆಯ ಜಾತಿಗೆ ಸೇರಿವೆ. ಅದರಲ್ಲಿ‌ ಒಂದು ಒಸಿಡಿ. ಅಂದರೆ " ಆಬ್ಸೆಸಿವ್ ಕಂಪಲ್ಸೀವ್ ಡಿಸಾರ್ಡರ್ ".  ಇದು ಒಂದು ಮಾನಸಿಕ ರೋಗವಾದರೂ, ಅವರು ಎಲ್ಲರಂತೆ ಬಟ್ಟೆ ಹರಿದುಕೊಂಡು, ಲಾಗ ಹಾಕಿಕೊಂಡು ಇರುವುದಿಲ್ಲ. ಇನ್‌ಫ್ಯಾಕ್ಟ್ ಅವರಿಗೆ ಆ ಖಾಯಿಲೆ ಇದೆ ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಇಂತಹಾ ಒಂದು ಮಾ...

ಛೂ ಮಂತರ್ (ಕನ್ನಡ)

Image
  ಕರ್ವ ನಿರ್ದೇಶಕರಾದ ನವನೀತ್ ಅವರ "ಛೂ ಮಂತರ್" ಸಿನೆಮಾದ ಮೇಲೆ ಸ್ವಲ್ಪ ನಿರೀಕ್ಷೆಗಳು ಹೆಚ್ಚಾಗಿಯೇ ಇದ್ದವು. ಏಕೆಂದರೆ ನಾವು ಯಾವುದೇ ಸಿನೆಮಾ ನೋಡುವಾಗ, ಆ ನಿರ್ದೇಶಕರ ಹಿಂದಿನ ಸಿನೆಮಾವನ್ನು ನೆನಪಿಸಿಕೊಂಡು, ತುಲನೆ ಮಾಡಿಯೇ ಮಾಡುತ್ತೇವೆ. ಜೊತೆಗೆ ಈಗಾಗಲೇ ಬೇಕಾದಷ್ಟು ಹಾರರ್ ಮೂವಿಗಳನ್ನು ನೋಡಿರುವ ನಮಗೆ, ಈ ನಿರ್ದೇಶಕರು ತಮ್ಮ ಚಿತ್ರದಲ್ಲಿ ಎಲ್ಲಿಯೂ ನೀಡಿರದಂತಹಾ ಅನುಭವ ಕೊಡ್ತಾರೆ ಅನ್ನುವ ನಿರೀಕ್ಷೆಯೂ ಸ್ವಲ್ಪ ಜಾಸ್ತಿಯೇ ಇತ್ತು. ಇಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನೆಮಾ ನೋಡಲು ಕೂತೆ. ಮೊದಲಿಗೆ ಇಷ್ಟವಾಗಿದ್ದು ಚಿತ್ರಕಥೆ. ಎಲ್ಲಿಯೂ ಬೋರ್ ಆಗದ ಹಾಗೆ, ಎರಡು ಟೈಮ್ ಲೈನ್ಗಳನ್ನು  ಒಂದೇ ಸಮನೆ ತೆಗೆದುಕೊಂಡು ಹೋಗಿದ್ದು ತುಂಬಾ ಚೆನ್ನಾಗಿತ್ತು. ಇದು ಎಲ್ಲಿಯೂ ಮಿಸ್ ಹೊಡೆದಿಲ್ಲ ಮತ್ತು ಇದೆರೆಡೂ ಬೇರೆ ಬೇರೆ ಅಂತ ಎಲ್ಲಿಯೂ ಅನುಮಾನ ಬರುವುದಿಲ್ಲ. 2024ರಲ್ಲಿ ಇರುವ ಟೆಕ್ನಾಲಜಿ, 2002ರಲ್ಲಿ ಇಲ್ಲದೇ ಇರುವುದನ್ನು ಕೂಡಾ ಕಥೆಯಲ್ಲಿ ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಮಗೆ ವಿಷಯವೆಲ್ಲಾ ಗೊತ್ತಾಗಿ, ಮತ್ತೊಂದು ಬಾರಿ ಸಿನೆಮಾ ನೋಡಲು ಕುಳಿತರೂ ಸಹ, ಒಂದೇ ಒಂದು ಮಿಸ್ಟೇಕ್ ಕೂಡಾ ಕಂಡು ಬರುವುದಿಲ್ಲ. ಅಷ್ಟು ಪರ್ಫೆಕ್ಟ್ ಆಗಿ ಚಿತ್ರಕಥೆ ಹೆಣೆದಿದ್ದಾರೆ. ಇನ್ನು ಶರಣ್ ಅಂತೂ ಡೈನಮೋ ಪಾತ್ರದಲ್ಲಿ ನಟಿಸಿಲ್ಲ, ಬದಲಿಗೆ ಜೀವಿಸಿದ್ದಾರೆ. ಇಷ್ಟು ದಿನ ಸೀರಿಯಸ್ ಚಿತ್ರದಲ್ಲಿಯೂ ಕಾಮೆಡಿ ಮಾಡುತ್ತಿದ್ದ ನಟ, ಇದರಲ...

ಲಕ್ಕಿ ಭಾಸ್ಕರ್ (ತೆಲುಗು)

Image
  ನಾವು ಚಿಕ್ಕವರಿರುವಾಗ 'ದೊಡ್ಡವರಾದ ಮೇಲೆ ಒಳ್ಳೆಯವರಾಗಬೇಕು, ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು' ಅಂತಲೇ ಎಲ್ಲರೂ ಹೇಳಿಕೊಡುತ್ತಾರೆ. ಅದೇ ರೀತಿ ಇರುವ ಪ್ರಯತ್ನ ಕೂಡಾ ನಾವು ಮಾಡುತ್ತೇವೆ. ಆದರೆ ಅದರಿಂದ ನಮಗೆ ಸಿಗುವುದು ಕೇವಲ ನಿಂದನೆ ಮತ್ತು ಅಪಮಾನ ಮಾತ್ರ.  ಲಕ್ಕಿ ಭಾಸ್ಕರ್ ಕಥೆಯೂ ಅಂಥದ್ದೇ.  ತನ್ನಲ್ಲಿರುವ ದುಡ್ಡಿನಿಂದ ತೃಪ್ತನಾಗಿ ಸಂಸಾರ ಮಾಡಿಕೊಂಡಿದ್ದ ಭಾಸ್ಕರ್ಗೆ, ಹೆಚ್ಚು ದುಡ್ಡು ಮಾಡಬೇಕು ಎಂಬ ಆಸೆ ಹುಟ್ಟಿಸಿದ್ದು ಇದೇ ಸಮಾಜ ಮತ್ತು ಸಮಾಜದ ಜನರು. ಅವರು ಮಾಡುವ ಮೋಸ ಮತ್ತು ಅವಮಾನಗಳಿಂದ ಪ್ರೇರಿತನಾಗಿ ಅವನು ದುಡ್ಡು ಮಾಡಲು ಹೊರಡುತ್ತಾನೆ.  ಇಲ್ಲೊಂದು ವಿಷಯ ಹೇಳಬೇಕು.  ಇದು ಬೇರೆಲ್ಲಾ ಸಿನಿಮಾಗಳಂತೆಯೇ ಶುರುವಾದರೂ, ಇದರ ನಾಯಕಿಯ ಪರಿಚಯ ತುಂಬಾ ವಿಶೇಷವಾಗಿತ್ತು. ಆಕೆಯನ್ನು ತುಂಬಾ ಮಹತ್ವದ ಪಾತ್ರ ಎನ್ನುವಂತೆ ಪರಿಚಯ ಮಾಡಿಸಿದ್ದು ನನಗಂತೂ ತುಂಬಾ ಇಷ್ಟವಾಯಿತು.  ಇನ್ನು ಕಥೆಯ ವಿಚಾರಕ್ಕೆ ಬಂದರೆ...  ಕಥೆ ನಮಗೆ ತುಂಬಾನೇ ಕನೆಕ್ಟ್ ಆಗುತ್ತದೆ. ಏಕೆಂದರೆ ನಾವು 90% ಜನ ಭಾಸ್ಕರನಂತೆಯೇ ಇದ್ದೇವೆ. ಮೇಲೆ ಏಳಲೂ ಆಗದೇ, ಕೆಳಗೆ ಬೀಳಲೂ ಸಹ ಆಗದೇ, ತ್ರಿಶಂಕುವಿನ ಥರಾ ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ. ಒಳ್ಳೆಯ ಮನಸ್ಸು, ಒಳ್ಳೆಯ ಗುಣ, ಪ್ರಾಮಾಣಿಕತೆ ಇದೆಲ್ಲಾ ಇದ್ದರೂ ಕೂಡಾ, ಯಾರೂ ಗುರುತಿಸದೇ ಇರುವುದು ನಮಗೆ ನೋವುಂಟು ಮಾಡುತ್ತದೆ. ಹಾಗಾಗಿ ಇದರ ಪ್ರತ್ಯಕ್ಷ ಅನುಭವ ಇರುವವರಿಗ...

"ಕಾರು" by ಶೀತಲ್ ಶೆಟ್ಟಿ

Image
  ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ.  ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ ಯೋಚನೆಗಳೂ ಬರದ ಮುಗ್ಧ ವಯಸ್ಸು ಅದು.. ಆ ಚಿಕ್ಕ ವಯಸ್ಸಿನಲ್ಲಿ ನಾವೇನು ಬಯಸಿರಬಹುದು..? ಇಲ್ಲೊಬ್ಬ ಪುಟ್ಟಿ ಇದ್ದಾಳೆ..  ಆಕೆಗೆ "ಕಾರ್" ಎಂದರೇನೇ ಆಕರ್ಷಣೆ.. ಮೊದಲು ಅದನ್ನು ಕೊಳ್ಳಬೇಕು, ನಂತರ ಅದು ಚಲಿಸಲು ಪೆಟ್ರೋಲ್ ಹಾಕಿಸಬೇಕು.. ಉಹುಂ ಅದೆಲ್ಲ ನಮ್ ಪುಟ್ಟಿಗೆ ಗೊತ್ತಿಲ್ಲ. ಅವಳಿಗೆ ಕಾರ್ ಅಂದ್ರೆ ಕಾರ್ ಅಷ್ಟೇ.. ಸದಾ ಪುಟ್ಟ ಆಟದ ಕಾರ್ ಇಟ್ಕೊಂಡು ಆಟ ಆಡ್ತಿರುತ್ತಾಳೆ..  ದೊಡ್ಡ ಕಾರ್ ಹೇಗಿರುತ್ತದೆ ಅಂತಲೇ ಆಕೆಗೆ ಗೊತ್ತಿರುವುದಿಲ್ಲ. ಅದನ್ನು ತನ್ನ ಗೆಳೆಯನ ಬಳಿ ಕೇಳಿದಾಗ ಅವನೋ "ಅದೊಂದು ಬೇರೆಯದೇ ಪ್ರಪಂಚ.. ಕಾರಿನೊಳಗೆ ಚಾಕ್ಲೇಟೂ, ಬಿಸ್ಕೇಟೂ, ಆಟ ಸಾಮಾನೂ ಇರುತ್ತೆ" ಅಂತ ಹೇಳ್ತಾನೆ. ಮಕ್ಕಳೇ ಹಾಗಲ್ವೇ? ಅವರ ಎಲ್ಲಾ ಯೋಚನೆಗಳೂ ಚಾಕ್ಲೇಟೂ-ಬಿಸ್ಕೇಟಿನ ಸುತ್ತಲೇ ಸುತ್ತುವುದು.  ಒಮ್ಮೆ ಸ್ಕೂಲಿನ ಬಳಿ‌ ಒಂದು ಕಾರ್ ಕಂಡರೂ ಪುಟ್ಟಿ ಅಲ್ಲಿಗೆ ಹೋಗುವಷ್ಟರಲ್ಲಿ ಕಾರ್ ಹೊರಟುಬಿಡುತ್ತದೆ. ಇದು ಪುಟ್ಟಿಯನ್ನು ಮತ್ತೂ ಕೆರಳಿಸುತ್ತದೆ. ಈ ಕಾರ್ ಅನ್ನೋಂಥದ್ದೇನಿದೆ ಅಂತ ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾಳೆ. ಆ ಊರಿನಲ್ಲಿ ದೆವ್ವದ ಮನೆಯೊಂದಿರುತ್ತೆ. 'ಅಜ್ಜಯ್ಯನ ಮನೆ'...  ಊರ...

ಬೀರಬಲ್ Trilogy (ಕನ್ನಡ)

Image
  ಸಿನೆಮಾ             : ಬೀರಬಲ್                           Trilogy Case 1 ನಿರ್ದೇಶಕರು      : ಎಂ.ಜಿ.ಶ್ರೀನಿವಾಸ್ ಪಾತ್ರವರ್ಗ        : ಎಂ.ಜಿ. ಶ್ರೀನಿವಾಸ್,                            ರುಕ್ಮಿಣಿ  ವಸಂತ್,                            ಸುರೇಶ ಹೆಬ್ಳೀಕರ್ ಇಸವಿ              ‌ ‌‌  : 2019 ಈ ಸಿನೆಮಾದ ಕಡೆಯ ಸಾಲುಗಳು ಈ ರೀತಿ ಇವೆ. "ಒಬ್ಬ ಶಕ್ತಿವಂತ ಶಕ್ತಿ ಇರುವ ತನಕ ಮಾತ್ರ ಗೆಲ್ತಾನೆ, ಆದರೆ ಅದೇ ಒಬ್ಬ ಬುದ್ಧಿವಂತ ಯಾವಾಗ್ಲೂ ಗೆಲ್ತಾನೆ" ಯಾಕಂದ್ರೆ ಗೆಲ್ಲೋಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ.. ಬೀರಬಲ್ ! ಅಂದ್ರೆ ಮಹೇಶ್ ದಾಸ್. ನಮ್ಮ ಹೀರೋ ಹೆಸರು ಕೂಡಾ ಅದೇ.. ಮಹೇಶ್ ದಾಸ್. ಮೊದಲ ನೋಟಕ್ಕೇ ನಮ್ಮನ್ನು ಬೋಲ್ಡ್ ಮಾಡುವ ಟ್ಯಾಲೆಂಟೆಡ್ ಹೀರೋ ಇವರು. ಹೇಗಂತೀರಾ? ಸಾಮಾನ್ಯವಾಗಿ ಸಿನೆಮಾಗಳಲ್ಲಿ ಹೀರೋ ಎಂಟ್ರಿ ಹೇಗಿರುತ್ತದೆ? ಭರ್ಜರಿ ಸಾಂಗ್...

Irul (ಮಲಯಾಳಂ)

Image
ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಗಾದೆಯಂತಿದೆ ಈ ಸಿನೆಮಾ. ಇರುವುದೇ ಮೂರು ಕ್ಯಾರೆಕ್ಟರುಗಳು. ಒಬ್ಬ ಹೀರೋ, ಒಬ್ಬಳು ಹೀರೋಯಿನ್, ಮತ್ತೊಬ್ಬ ವಿಲನ್. ಹೀರೋಯಿನ್ ಯಾರು ಅಂತ ನೋಡದೇ ಕೂಡಾ ಹೇಳಬಹುದು. ಆದರೆ ಹೀರೋ ಯಾರು, ವಿಲನ್ ಯಾರು ಅಂತ ಹೇಳುವುದಕ್ಕೆ ಮಾತ್ರ ಸಿನೆಮಾವನ್ನು ಕೊನೆಯವರೆಗೂ ನೋಡಬೇಕಾಗುತ್ತದೆ. ಅಲೆಕ್ಸ್ ಎಂಬಾತ ಒಬ್ಬ ಲೇಖಕ. ತನ್ನ ಮೊದಲ ಪುಸ್ತಕ 'ಇರುಳ್' ಅನ್ನು ಆಗಷ್ಟೇ ಲೋಕಾರ್ಪಣೆ ಮಾಡಿರುತ್ತಾನೆ. ಅದೊಂದು ಡಾರ್ಕ್ ಸಬ್ಜೆಕ್ಟ್. ಅಂದರೆ ಸರಣಿ ಹತ್ಯೆಗಳ ಕುರಿತಾದ ನಿಜವಾದ ಸುದ್ದಿಯನ್ನು ಆಧರಿಸಿ, ತನ್ನದೇ ದೃಷ್ಟಿಕೋನದಿಂದ ಆ ಪುಸ್ತಕ ಬರೆದಿರುತ್ತಾನೆ. ಸದಾ ಅದನ್ನೇ ಯೋಚಿಸುತ್ತಿದ್ದರಿಂದಲೋ ಏನೋ, ರಾತ್ರಿ ಮಲಗಿದಾಗ ಅವನಿಗೆ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಅದರಿಂದ ಅವನು ತುಂಬಾ ಡಿಸ್ಟರ್ಬ್ ಆಗಿರುತ್ತಾನೆ. ಅವನು ಅದನ್ನು ಮರೆಯಬೇಕೆಂದು ತನ್ನ ಗೆಳತಿ ಅರ್ಚನಾ ಬಳಿ ಹೋದರೆ, ಅವಳು ತುಂಬಾ ಬ್ಯುಸಿ ಇರುತ್ತಾಳೆ. ಅವಳು ಲಾಯರ್ ಆಗಿರುವುದರಿಂದ ಸದಾಕಾಲವೂ ಕೇಸ್ ಬಗೆಗಿನ ಫೋನ್ ಬರುತ್ತಲೇ ಇರುತ್ತದೆ. ಅಲೆಕ್ಸ್ ಇದರಿಂದ ಬೇಸತ್ತು, ತಾವಿಬ್ಬರೂ ಒಂದೆರೆಡು ದಿನ ಹೊರಗೆ ಎಲ್ಲಾದರೂ ಹೋಗಿ ಬರೋಣ ಅಂತ ಕೇಳುತ್ತಾನೆ. ಅರ್ಚನಾ ಒಪ್ಪುತ್ತಾಳೆ. ಆದರೆ ಅಲೆಕ್ಸ್ ಒಂದು ಷರತ್ತು ವಿಧಿಸುತ್ತಾನೆ. ಏನೆಂದರೆ ಅರ್ಚನಾ ತನ್ನ ಜೊತೆಯಲ್ಲಿ ಮೊಬೈಲ್ ಫೋನ್ ತರಬಾರದು ಅಂತ. ಜೊತೆಗೆ ತಾವು ಜೊತೆಗಿದ್ದಷ್ಟು ಹೊತ್ತೂ ಪರಸ...

Source code (ಇಂಗ್ಲೀಷ್)

Image
  ನಾವು ಸತ್ತ ನಂತರ ಈ ಪ್ರಪಂಚ ಹೇಗಿರುತ್ತದೆ ಅಂತ ನಮಗೆ ಗೊತ್ತಾಗುವುದಿಲ್ಲ. ಏಕೆಂದರೆ ನಾವು ಸಾಯುತ್ತಿದ್ದಂತೆ, ಈ ಜಗತ್ತಿನ ಜೊತೆಗಿನ ನಮ್ಮ ಕೊಂಡಿ ಶಾಶ್ವತವಾಗಿ ಕಳಚಿಕೊಳ್ಳುತ್ತದೆ. ಆದರೆ ಒಂದು ವೇಳೆ ನಾವು ಸತ್ತ ನಂತರವೂ, ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ನಾನು ಈ ಸಿನೆಮಾವನ್ನು ನೋಡಿದ್ದು ಕೇವಲ ಕುತೂಹಲಕ್ಕಾಗಿ. ಆದರೆ ನಂತರ ತಲೆಗೆ ಎಂತಹಾ ಹುಳ ಬಿಟ್ಟ ಹಾಗಾಯ್ತು ಎಂದರೆ, ಈ ಸಿನೆಮಾ ಬಗೆಗಿನ ಎಲ್ಲಾ ಮಾಹಿತಿಯನ್ನೂ ರಾತ್ರಿಯಿಡೀ ಜಾಲಾಡುವಂತಾಯ್ತು. ಹಿಂದಿಯಲ್ಲಿ ಈ ಸಿನೆಮಾ ವಿವರಣೆಯನ್ನು ಹುಡುಕಿ ಹುಡುಕಿ ನೋಡಿದ್ದಾಯ್ತು. ನಂತರ ಸಿನೆಮಾವನ್ನೇ ಮತ್ತೆ ಮತ್ತೆ ಹಿಂದೆ, ಮುಂದೆ ಓಡಿಸಿದ್ದಾಯ್ತು. ಇಷ್ಟು ಮಾಡಿದ ನಂತರವೇ ನನಗೆ ಸಿನೆಮಾ ಅರ್ಥವಾಗಿರಬೇಕಾದರೆ, ಈ ಸಿನೆಮಾ ನೋಡದವರಿಗೆ ಅರ್ಥವಾಗುವ ಹಾಗೆ ಬರೆಯುವುದು ಹೇಗೆ? ನೋಡದವರು ಇರಲಿ, ನೋಡಿದವರಿಗೇ ಅರ್ಥ ಆಗಿರುವುದು ಅನುಮಾನ. ಇಂದಿಗೂ ಈ ಸಿನೆಮಾವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಅಂತ ಜಗತ್ತಿನಾದ್ಯಂತ ಚರ್ಚೆಯಾಗುತ್ತಲೇ ಇದೆಯಂತೆ. ಮೊದಲಿಗೆ; ಸ್ಟೀವನ್ಸ್ ಎನ್ನುವ ಸೈನಿಕನಿಗೆ ಅಚಾನಕ್ಕಾಗಿ ಎಚ್ಚರವಾಗುತ್ತದೆ. ಆಗವನು ಒಂದು ಚಲಿಸುವ ಟ್ರೈನಿನೊಳಗೆ ಇರುತ್ತಾನೆ. ಅವನೆದುರು ಒಬ್ಬ ಅಪರಿಚಿತ ಯುವತಿ ಕುಳಿತಿರುತ್ತಾಳೆ. ಆದರೆ ಅವಳು ಸೈನಿಕನ ಪರಿಚಯ ಇರುವ ಹಾಗೆ ಮಾತನಾಡುತ್ತಾಳೆ. ಸೈನಿಕನಿಗೆ ಇಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗುವುದಿಲ್ಲ. ಏಕೆಂದರೆ ...