Posts

Showing posts from June, 2022

Vellai Pookkal (Tamil) ಸಿನೆಮಾ ವಿಮರ್ಶೆ

Image
  ಎರಡು ರೇಖೆಗಳು ಸಮಾನಾಂತರವಾಗಿ ಚಲಿಸುತ್ತಿರುತ್ತವೆ. ಆದರೆ ಅವರೆಡೂ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ. ಅಕಸ್ಮಾತ್ ಸಂಧಿಸಿದರೆ ಏನಾಗುತ್ತದೆ....?? ಈ ಸಿನೆಮಾ ಆಗುತ್ತದೆ. ಹೇಗೆ? ನೀವೇ ನೋಡಿ.. ರೇಖೆ-1 ಚೆನ್ನೈ ಪೊಲೀಸ್ ಅಧಿಕಾರಿ 'ರುದ್ರನ್' ಕೊಲೆ ಕೇಸುಗಳನ್ನು ಲೀಲಾಜಾಲವಾಗಿ ಬಿಡಿಸುವುದರಲ್ಲಿ ಪ್ರವೀಣ. ಸಿನೆಮಾದ ಶುರುವಿನಲ್ಲಿ ಆತ ಬಗೆಹರಿಸುವ ಕೊಲೆ ಕೇಸಿನಿಂದ ಆತ ಎಷ್ಟು ಚಾಣಾಕ್ಷ ಅಂತ ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟೇ ಚಾಣಾಕ್ಷನಾಗಿರಲಿ ಸೇವೆಯ ಅವಧಿ ಮುಗಿದ ಮೇಲೆ ರಿಟೈರ್ ಆಗಲೇಬೇಕು. ಹಾಗೆಯೇ ರುದ್ರನ್ ಸಹ ತನ್ನ ಸೇವೆಯಿಂದ ನಿವೃತ್ತನಾಗುತ್ತಾನೆ.‌ ನಂತರ ಆತ ತನ್ನ ಮಗ ನೆಲೆಸಿರುವ ದೇಶವಾದ ಅಮೆರಿಕಾಗೆ ಹೋಗುತ್ತಾನೆ. ಮಗ ಅಲ್ಲಿಯ ಬಿಳಿ ಹೆಂಡತಿಯನ್ನು ಮದುವೆ ಆಗಿದ್ದಾನೆಂದು ರುದ್ರನ್ ಕೋಪ ಮಾಡಿಕೊಂಡು ಬಹಳ ವರ್ಷಗಳಿಂದ ಮಗನನ್ನು ಮಾತು ಸಹ ಆಡಿಸಿರುವುದಿಲ್ಲ. ಈಗ ಆ ಮನಸ್ತಾಪ ಮರೆತು ಮಗನ ಜೊತೆ ಕಾಲ ಕಳೆಯಲು ಅಮೆರಿಕಾಗೆ ಹೋಗುತ್ತಾನೆ ರುದ್ರನ್. ಮಗ-ಸೊಸೆ ಇಬ್ಬರೂ ಆತನನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಆತನ ಸೊಸೆ ಮಾವನಿಗಾಗಿ ತಮಿಳು ಮಾತನಾಡುವುದನ್ನು, ದಕ್ಷಿಣ ಭಾರತದ ತಿಂಡಿ ಮಾಡುವುದು ಕಲಿಯುತ್ತಿರುತ್ತಾಳೆ. ಆದರೂ ಯಾಕೋ ರುದ್ರನ್ ತನ್ನ ಮಗನನ್ನು ಒಪ್ಪಿಕೊಂಡಷ್ಟು ಮುಕ್ತವಾಗಿ ಸೊಸೆಯನ್ನು‌ ಒಪ್ಪಿಕೊಳ್ಳುವುದಿಲ್ಲ. ಸೊಸೆ ಸೋಲೊಪ್ಪಿಕೊಳ್ಳದೇ ದಿನನಿತ್ಯವೂ ಮಾವನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲ...

Thumbadd (Marathi) ಸಿನೆಮಾ ವಿಮರ್ಶೆ

Image
  Thumbbad ಎಂಬುದು ಒಂದು ಊರಿನ ಹೆಸರು ಹೆಸರು ಮತ್ತು ಪೋಸ್ಟರ್ ನೋಡಿಯೇ ಇದ್ಯಾವುದೋ ಭಯಾನಕ (Horror) ಸಿನೆಮಾ ಅಂತ ಅರ್ಥವಾಗಿತ್ತು. ಈ ಸಿನೆಮಾ ನೋಡಲು ಶುರು ಮಾಡಿದಾಗಲೇ ರಾತ್ರಿ... ಮುಗಿದಾಗ ಮಧ್ಯರಾತ್ರಿ. ಮನಸ್ಸಿನಲ್ಲಿಯೇ ಸಿನೆಮಾ ಅನ್ನು ವಿಮರ್ಶಿಸುತ್ತಾ ಮಲಗಿದವಳಿಗೆ ಎಚ್ಚರವಾದದ್ದು ಬೆಳಗಿನ ಝಾವ. ಎದ್ದ ಕೂಡಲೇ ಅನ್ನಿಸಿದ್ದು 'ನಾನು ಸಿನೆಮಾ ನೋಡಿದೆನೋ? ಅಥವಾ ಕನಸು ಕಂಡೆನೋ?' ಅಂತ.  ನಿಜಕ್ಕೂ ಕನಸಿನಂತೆಯೇ ಇದೆ ಸಿನೆಮಾ.  ಯಾರಾದರೂ ಊಹೆ ಸಹ ಮಾಡಿರಲಿಕ್ಕಿಲ್ಲ ಈ ರೀತಿ ಆಗಬಹುದು ಅಂತ. ಥೇಟ್ ನಮ್ಮ ಕನಸಿನ ಹಾಗೆಯೇ ಸಿನೆಮಾದಲ್ಲಿಯೂ ಫ್ಯಾಂಟಸಿ ನಡೆಯುತ್ತದೆ. "ಕನಸು" ಅಂತಲೇ ಯಾಕೆ ಹೇಳಿದೆ ಎಂದರೆ, ನಾವು ನಮ್ಮ ಕನಸಿನಲ್ಲಿ ಏನು ನಡೆದರೂ ನಂಬುತ್ತೇವೆ. ಇಲ್ಲೂ ಹಾಗೆಯೇ.... ಯೋಚನೆಗೆ ಆಸ್ಪದವೇ ಇಲ್ಲ.. ಘಟನೆಗಳು ಸುಮ್ಮನೆ ನಡೆಯುತ್ತಾ ಹೋಗುತ್ತವೆ... ನಾವು 'ಮುಂದೇನು?' ಎಂಬ ಕಾತುರದಲ್ಲಿ ಕಾಯುವುದೊಂದೇ ಮಾರ್ಗ.. ಸಿಂಪಲ್ ಆಗಿ ಹೇಳಬೇಕಂದ್ರೆ ಇದೊಂದು ನಿಧಿಯ ಹುಡುಕಾಟದ ಕಥೆ.  ಶುರುವಿನಲ್ಲಿಯೇ ನಮಗೆ ಈ ಬಗ್ಗೆ ಮಾಹಿತಿ ಸಿಗುತ್ತದೆ. ಜೊತೆಗೆ ಆ ನಿಧಿ ಇನ್ನೂ ಯಾರಿಗೂ ಸಿಕ್ಕಿಲ್ಲ ಅನ್ನುವುದೂ ಸಹ ಗೊತ್ತಾಗುತ್ತದೆ. ಯಾರಿಗೂ ದಕ್ಕಿರದ ಆ ನಿಧಿಯನ್ನು ಕಾಣಲು, ಅದೆಲ್ಲಿದೆ ಅಂತ ತಿಳಿಯಲು ನಾವೂ ಸಹ ಆಸೆ ಪಡುತ್ತೇವಲ್ಲ... ಅಲ್ಲಿ ನಿರ್ದೇಶಕರು ಗೆದ್ದಿದ್ದಾರೆ ❤  ವಿನಾಯಕ... ಈ ಸಿನೆಮಾದ ಕಥಾನಾಯಕ. ತನ್ನ...

Newton (Hindi) ಸಿನೆಮಾ ವಿಮರ್ಶೆ

Image
  ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ ಹೀರೋ ನ್ಯೂಟನ್ನಿಗೆ ಸಿಗುವ ಉಡುಗೊರೆ ಇದೇ... !!  ನಿಜವಾದ ನ್ಯೂಟನ್ ಹೊಸ ವಿಷಯಗಳನ್ನು ಕಂಡು ಹಿಡಿಯುವ ವಿಜ್ಞಾನಿಯಾದರೆ, ನಮ್ಮ ಹೀರೋ ನ್ಯೂಟನ್ ಈಗಿರುವ ವಿಷಯವನ್ನೇ ಅರಗಿಸಿಕೊಳ್ಳಲಾಗದೇ ತೊಳಲಾಡುವವನು. ರಾತ್ರೋರಾತ್ರಿ ಕೆಟ್ಟು ಕೂತಿರುವ ವ್ಯವಸ್ಥೆ ವಿರುದ್ಧ ಹೋರಾಡಿ ಗೆಲ್ಲಬೇಕೆಂದುಕೊಂಡವನು. ಆದರೆ ಅದರಲ್ಲಿ ಯಶಸ್ಸು ಸಿಗದೇ ಇತ್ತ ಕಡೆ ಸೋಲನ್ನೂ ಒಪ್ಪಿಕೊಳ್ಳದೇ ಪರದಾಡುತ್ತಿರುವನು. ಭಾರತೀಯರಲ್ಲಿ ಅನೇಕ ವಿಷಯಗಳು ಹಾಸುಹೊಕ್ಕಾಗಿವೆ. ಅದರಲ್ಲಿ ನಿರ್ಲಕ್ಷ್ಯತೆಯೂ ಒಂದು. ನೇರ ತನ್ನ ಬುಡಕ್ಕೆ ಬರುವವರೆಗೂ ಯಾರೂ ತುಟಿಕ್-ಪಿಟಿಕ್ ಎನ್ನಲಾರರು. ಇಂತಹಾ ಸಂದರ್ಭದಲ್ಲಿ ಯಾವುದೋ ಒಂದು ಮೂಲೆಯಲ್ಲಿರುವ, ನಕ್ಸಲರ ತಾಣ ಎಂದು ಗುರುತಿಸಿಕೊಂಡಿರುವ ಹಳ್ಳಿಯೊಂದಕ್ಕೆ ಮತದಾನದ ಕರ್ತವ್ಯ ನಿರ್ವಹಿಸಲು ಕರೆ ಬಂದರೆ ಯಾರು ತಾನೇ ಹೋಗುತ್ತಾರೆ? ಈಗಾಗಲೇ ಅಲ್ಲಿಗೆ ನಿಯೋಜನೆಗೊಂಡಿದ್ದ ಅಧಿಕಾರಿ ಹೃದ್ರೋಗದ ನೆಪ ಹೇಳಿ ತಪ್ಪಿಸಿಕೊಂಡಿರುತ್ತಾನೆ. ಆಗ ಅವನ ಜಾಗಕ್ಕೆ ನಮ್ಮ ಹೀರೋ ನ್ಯೂಟನ್ ಹೊರಡುತ್ತಾನೆ.  ಅದು ನಕ್ಸಲ್ ಪ್ರದೇಶ ಎಂದು ಹೇಳಿದಾಗ ನಮಗೆ ಇಲ್ಲಿಯೇ ನಡುಕ ಶುರುವಾಗಿರುತ್ತದೆ. ಆದರೆ ಅವನು ಧೈರ್ಯವಾಗಿ ಹೊರಡುತ್ತಾನೆ....

Saithan (Tamil) ಸಿನೆಮಾ ವಿಮರ್ಶೆ

Image
  ಸೈತಾನ ಎಂದರೇನು? ಸಿಂಪಲ್... ಮನುಷ್ಯ ಅಲ್ಲದವನೇ ಸೈತಾನ. ಹಾಗಾದರೆ ಮನುಷ್ಯ ಸೈತಾನನಾಗಲು ಏನು ಮಾಡಬೇಕು? ಅದೂ ಸಹ ಸಿಂಪಲ್. ಮನುಷ್ಯತ್ವ ಮರೆತರೆ ಆಯ್ತು. ಆದರೆ ನನಗೆ ಸದಾ ಕಾಡುವ ವಿಚಾರವೆಂದರೆ, ಸೈತಾನ ಯಾಕೆ ಯಾವಾಗಲೂ ಮನುಷ್ಯರ ವಿರುದ್ಧವಾಗಿಯೇ ವರ್ತಿಸುತ್ತಾನೆ, ಮನುಷ್ಯನನ್ನು ತನ್ನ ಶತೃ ಎಂದು ಯಾಕೆ ಎಂದುಕೊಳ್ಳುತ್ತಾನೆ ಅಂತ. ಸೈತಾನನಾದವನು ಮನುಷ್ಯರನ್ನು ಕೊಲ್ಲಲೇಬೇಕು ಎಂಬ ನಿಯಮವಿದೆಯೇ? ಸೈತಾನ ಸಹ ಮನುಷ್ಯನದ್ದೇ ಮತ್ತೊಂದು ರೂಪವಾದ ಮೇಲೆ ಅವನಲ್ಲಿಯೂ ತಾಳ್ಮೆ, ಕ್ಷಮೆ, ಬುದ್ಧಿ, ವಿವೇಚನೆಗಳು ಇರುತ್ತವೆಯಲ್ಲವೇ? ಅಂದ ಮೇಲೆ ಸೈತಾನ ಮನುಷ್ಯನನ್ನು ಕ್ಷಮಿಸಿ ಬಿಟ್ಟುಬಿಡಲು ಸಾಧ್ಯವಿಲ್ಲವೇ....? ಸಿನೆಮಾದ ಕಥೆ ಹೀಗಿದೆ. ನಾಯಕನ ಹೆಸರು ದಿನೇಶ್.‌  ಅತ್ಯಂತ ಬುದ್ಧಿವಂತನಾದ ದಿನೇಶ್ ನಮಗೂ ಸಹ ಹೊಟ್ಟೆಕಿಚ್ಚು ಬರಿಸುವಷ್ಟು ತಂತ್ರಜ್ಞಾನದಲ್ಲಿ ನಿಷ್ಣಾತ. ಜೊತೆಗೊಬ್ಬ ಅಮ್ಮ ಮತ್ತು ಸುಂದರಿಯಾದ ಹೆಂಡತಿ ಇರುವ ಮುದ್ದಾದ ಸಂಸಾರ ಆತನದ್ದು. ಆತನ ಹೆಂಡತಿ ಐಶ್ವರ್ಯಳನ್ನು ನೋಡಲು ಎರಡು ಕಣ್ಣು ಸಾಲದು ಎನ್ನುವಷ್ಟು ಸುಂದರಿ ಆಕೆ.‌ ಅದನ್ನು ನೋಡುತ್ತಾ, ಆಕೆಯ ಸೌಂದರ್ಯದೊಳಗೆ ಕಳೆದು ಹೋಗುತ್ತಾ ಸಿನೆಮಾದ ಹೆಸರೇ ನಮಗೆ ಮರೆತು ಹೋಗುವಂತಹಾ ಸಮಯದಲ್ಲಿ ಅವನ ಜೀವನ ಹಠಾತ್ ತಿರುವು ಪಡೆಯುತ್ತದೆ.‌ ಇದ್ದಕ್ಕಿದ್ದಂತೆ ದಿನೇಶನಿಗೆ ಯಾರೋ ತನ್ನ ಕಿವಿಯಲ್ಲಿ ಪಿಸುಗುಟ್ಟಿದ ಹಾಗೆ ಒಂದು ಧ್ವನಿ ಕೇಳಲು ಶುರುವಾಗುತ್ತದೆ. ಶಬ್ದ ಮಾತ್ರ ಕೇಳುತ...

ಸೂರರೈಪೊಟ್ರು (ಕನ್ನಡ ಡಬ್) ಸಿನೆಮಾ ವಿಮರ್ಶೆ

Image
  ಈ ಸಿನೆಮಾವನ್ನು ಕೇವಲ ಕಾಲ್ಪನಿಕ ಅಂತ ಯಾರಾದರೂ ಹೇಳಿದ್ದರೆ ನಾನು ಈ ಸಿನೆಮಾ ಅನ್ನು ಖಂಡಿತಾ ಒಪ್ಪುತ್ತಿರಲಿಲ್ಲ. ವಿಮಾನದ ಟಿಕೆಟ್ಟಿಗೆ ದುಡ್ಡಿರದ ವ್ಯಕ್ತಿ ಏರ್ಲೈನ್ಸ್ ನಡೆಸಿ ಯಶಸ್ವಿಯಾದ ಕಥೆ....!!! ಇದು ಸುಮ್ಮನೆ ನಾಯಕನಿಗಾಗಿ ಹೆಣೆದ ಕಥೆ ಆಗಿದ್ದರೆ ಬಹುಶಃ ಯಾರೂ ಇಷ್ಟಪಡುತ್ತಿರಲೂ ಇಲ್ಲ. ಆದರೆ ಇದು ನಿಜವಾಗಿ ನಡೆದ ಕಥೆ.‌.... !!!!! ಅದಕ್ಕಾಗಿಯೇ ‌ನಮಗೆ ಇಷ್ಟೊಂದು ಆಶ್ಚರ್ಯ. ಈ ವಿಷಯದ ಬಗ್ಗೆ ಕಥೆ ಬರೆಯಲೂ ಸಹ ಹಿಂದೆ-ಮುಂದೆ ಯೋಚಿಸುವಾಗ, ಇದನ್ನು ಒಬ್ಬ ವ್ಯಕ್ತಿ ಜೀವಿಸಿಬಿಟ್ಟಿದ್ದಾರೆ... !!!!! ಅಕ್ಷರಶಃ ಪವಾಡದಂತೆಯೇ ತೋರುವ ಈ ಯಶಸ್ಸು ನಮ್ಮೆಲ್ಲರಿಗೂ ಸ್ಫೂರ್ತಿಯಾಗುತ್ತದೆ. ನಮ್ಮಂತಹಾ ಸಾಮಾನ್ಯರಿಗೂ ಅಸಾಮಾನ್ಯರಾಗುವ ಬಯಕೆ ಮೂಡಿಸುತ್ತದೆ. ಸಿನೆಮಾದಲ್ಲಿ ನಾಯಕನೊಬ್ಬ ನೂರು ಜನರನ್ನು ಒಂದೇ ಬಾರಿ ಹೊಡೆದು ಪುಡಿಗಟ್ಟಿದ ಅಂದ್ರೆ ನಂಬ್ತೀವಿ..‌ ಒಂದೇ ತಿಂಗಳಲ್ಲಿ ಕೋಟಿ ರೂಪಾಯಿ ದುಡಿದ ಅಂದ್ರೆ ನಂಬ್ತೀವಿ.. ಸಿನೆಮಾದಲ್ಲಿ ಬರುವ ದೆವ್ವ-ಭೂತಗಳನ್ನು ನಂಬ್ತೀವಿ.. ಆದರೆ ಒಬ್ಬ ಸಾಮಾನ್ಯ ಯುವಕ ಸಾಧನೆ ಮಾಡಿದ ಅಂದ್ರೆ ಯಾಕೆ ನಂಬೋಲ್ಲ? ಅದೂ ವಿಶೇಷವಾಗಿ ಈ ಕಥೆ. ಯಾಕೆಂದರೆ ನಾನೊಬ್ಬಳು ಸಾಮಾನ್ಯಳು. ನನ್ನಂತಹ ಕೋಟ್ಯಾಂತರ ಜನರಿದ್ದಾರೆ. ನಾವೆಲ್ಲರೂ ವಿಮಾನವನ್ನು ಹತ್ತಿರದಿಂದ ನೋಡಿಯೂ ಇಲ್ಲ. ಅದರೊಳಗೆ ಕುಳಿತೂ ಇಲ್ಲ. ನಾವು ನೋಡದ, ನಮ್ಮ ಜೀವನದ ಅಂಗವಾಗಿರದ ವಿಮಾನ ಹಾರಾಟದ ಕನಸನ್ನು ನಾವು ಊಹಿಸಿಕೊಳ್ಳಲೂ ಸಾಧ...

Parasite (ಕೊರಿಯನ್) ಸಿನೆಮಾ ವಿಮರ್ಶೆ

Image
  Parasite ಎಂದರೆ ಪರಾವಲಂಬಿ ಜೀವಿಗಳು. ಅಂದರೆ ಮತ್ತೊಬ್ಬರನ್ನ ತಮ್ಮ ಆಸರೆಯನ್ನಾಗಿ ಮಾಡಿಕೊಂಡು ಬದುಕುತ್ತಿರುವ ಜೀವಿಗಳು ಅಂತರ್ಥ. ಕಡೆಗೆ ತಮಗೆ ಆಸರೆ ಕೊಟ್ಟವರನ್ನೇ ಕಬಳಿಸುತ್ತವೆ ಈ ಪರಾವಲಂಬಿ ಜೀವಿಗಳು. ಹಾಗಾಗಿ ಹೆಸರು ಕೇಳಿಯೇ ಸಿನೆಮಾ ನೋಡಲು ಸ್ವಲ್ಪ ಭಯವಾಯ್ತು.... ಅಂತ್ಯ ದುರಂತವಾಗಿರಬಹುದು ಎಂಬ ಊಹೆಯಿಂದ!! ಅಲ್ಲದೇ ಕೊರಿಯನ್ ಸಿನೆಮಾ ಬೇರೆ. ಭಾಷೆ-ಸಂಸ್ಕೃತಿ ಏನೂ ಗೊತ್ತಿಲ್ಲದೇ ಹೇಗೆ ನೋಡುವುದು ಅಂತ ಇಷ್ಟು ದಿನ ನೋಡಿರಲಿಲ್ಲ. ಆದರೆ ಕಲೆಗೆ ದೇಶ-ಭಾಷೆಗಳ ಗಡಿಯಿಲ್ಲ. ಮನುಷ್ಯನೊಳಗಿನ ಪ್ರೇಮ-ದ್ವೇಷ-ಅಸೂಯೆಗಳು ಪ್ರಪಂಚದೆಲ್ಲೆಡೆ ಒಂದೇ ರೀತಿಯಾಗಿರುತ್ತದೆ. ಮನುಷ್ಯ ಯಾವುದರಲ್ಲಿ ವಿಭಿನ್ನತೆ ತೋರಿದರೂ ತನ್ನ ಸ್ವಭಾವದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಈ ಸಿನೆಮಾ ತೋರಿಸಿಕೊಟ್ಟಿತು. ಹಿಂದಿ ಡಬ್ ಇರುವುದರಿಂದ ನಮ್ಮದೇ ಸಿನೆಮಾ ನೋಡಿದಷ್ಟು ಆಪ್ತತೆಯಿತ್ತು. ಸಿನೆಮಾ ಹೇಗೇ ಇರಲಿ.. ಎಷ್ಟೇ ಚೆನ್ನಾಗಿರಲಿ... ಅದನ್ನು ಪೂರ್ತಿ ನೋಡುವ ಹಾಗೆ ಮಾಡಬೇಕೆಂದರೆ ಶುರುವಿನ ಹತ್ತು-ಹದಿನೈದು ನಿಮಿಷ ಬಹಳ ಪ್ರಮುಖವಾಗಿರುತ್ತದೆ. ಆ ವಿಷಯದಲ್ಲಿ ಈ ಚಿತ್ರದ ನಿರ್ದೇಶಕರು ಗೆದ್ದಿದ್ದಾರೆ. ಒಮ್ಮೆ ನೋಡಲು ಶುರು ಹಚ್ಚಿಕೊಂಡವರು ಯಾವುದೇ ಕಾರಣಕ್ಕೂ ನಿಲ್ಲಿಸಲಾರರು. ಅಂತಹಾ ಬಿಗಿ ಕಥಾಹಂದರ ಇದರಲ್ಲಿದೆ. ಹಾಗಾದರೆ ಕಥೆಯೇನು? ನಮ್ಮ ನಿಮ್ಮೆಲ್ಲರ ಕಥೆಯೇ ಇದು. ನಮ್ಮ ಸುತ್ತಲೂ ಎಷ್ಟು ಸಿಕ್ಕರೂ ಸದಾ ಅತೃಪ್ತಿಯಿಂದಿರುವ, ಕ...

ಹೀರೋ (ತಮಿಳು) ಸಿನೆಮಾ ವಿಮರ್ಶೆ

Image
  ಸಿನೆಮಾದ ಆರಂಭ ಹೀಗಿದೆ. ಒಂದು ಪುಟ್ಟ ಮಗುವನ್ನು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂತಿದ್ದೀಯ ಅಂತ ಕೇಳಿದರೆ ಸೈನಿಕನಾಗಿ ದೇಶಸೇವೆ ಮಾಡಬೇಕು, ಡಾಕ್ಟರಾಗಿ ಜನಸೇವೆ ಮಾಡಬೇಕು ಅಂತ ಉತ್ತರ ಸಿಗುತ್ತದೆ. ಅದೇ ಮಗು ದೊಡ್ಡದಾದ ನಂತರ ಇದೇ ಪ್ರಶ್ನೆ ಕೇಳಿದರೆ ಉತ್ತಮ ಸಂಬಳವಿರುವ ಕೆಲಸ, ಇರಲು ಮನೆ, ಓಡಾಡಲು ಕಾರು ಬೇಕು ಅಂತ ಉತ್ತರ ಬರುತ್ತದೆ. ಒಂದು ಉದಾತ್ತ ಧ್ಯೇಯವುಳ್ಳ ಮಗುವಿನ ಮನಸ್ಸನ್ನು ಸ್ವಾರ್ಥಿಯನ್ನಾಗಿಸಿದ್ದು ಯಾರು? ಅದು ಮತ್ಯಾರೂ ಅಲ್ಲ.... ನಮ್ಮ ಶಿಕ್ಷಣ ವ್ಯವಸ್ಥೆ !!! ಮತ್ತೊಂದೆಡೆ ಒಂದು ಕಾರ್ಪೋರೇಟ್ ಕಂಪನಿಯಿದೆ. ಅದಕ್ಕೊಬ್ಬ ಅನಭಿಷಿಕ್ತ ದೊರೆಯಿದ್ದಾನೆ. ಅವನಿಗೆ ಜನರು ಯೋಚಿಸುವುದು ಬೇಕಿಲ್ಲ. ಕೇವಲ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವುದು ಬೇಕು. ಅಂದರೆ ಜನ ತಮ್ಮ ಸ್ವಂತ ಆಲೋಚನಾ ಶಕ್ತಿ ಉಪಯೋಗಿಸದೇ, ಆತ ನೀಡುವ ಸಂಬಳ ಪಡೆದುಕೊಂಡು, ಆತನ ಕಂಪನಿಯಲ್ಲಿ ಆತ ಹೇಳುವ ಕೆಲಸ ಮಾಡಿಕೊಂಡು, ವೀಕೆಂಡಲ್ಲಿ ಸಿನೆಮಾ ನೋಡಿಕೊಂಡು, ಸೋಮವಾರ ಮತ್ತೆ ಎದ್ದು ಕೆಲಸಕ್ಕೆ ಬರಬೇಕು. ಇದನ್ನು ಮೀರಿ ಯಾರಾದರೂ ಹೊಸತೇನಾದರೂ ಯೋಚಿಸಿದರೆ ಆತ ಅವರಿಗೆ ಲೋಬೋಟಮಿ ಮಾಡಿಬಿಡುತ್ತಾನೆ. ಲೋಬೋಟಮಿ ಒಂದು ರೀತಿಯ ಶಸ್ತ್ರಚಿಕಿತ್ಸೆ ಆಗಿದ್ದು, ಇದರಿಂದ ಮೆದುಳು ಯೋಚಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಇದನ್ನು ಕಣ್ಣಿನ ಮೂಲಕ ನೇರ ಮೆದುಳಿಗೆ ಸರ್ಜರಿ ಮಾಡಲಾಗುತ್ತದೆ. ಆಗ ಆ ಶಸ್ತ್ರಚಿಕಿತ್ಸೆಗೆ ಒಳಗಾದವರು ತಾವಾಗಿಯೇ ಏನನ್ನು ಯೋಚ...

ಅಹಲ್ಯ (ಬೆಂಗಾಲಿ) ಸಿನೆಮಾ ವಿಮರ್ಶೆ

Image
  ಗೊತ್ತಿದ್ದೂ ಮಾಡುವುದು ತಪ್ಪೋ ಅಥವಾ ಗೊತ್ತಿಲ್ಲದೇ ಮಾಡುವುದು ತಪ್ಪೋ? ಈ ಪ್ರಶ್ನೆ ಯಾಕೆಂದರೆ ಅಹಲ್ಯೆ ಗೊತ್ತಿಲ್ಲದೇ ಮಾಡಿದ ತಪ್ಪಿಗಾಗಿ ಗೌತಮ ಮಹರ್ಷಿಗಳು ಆಕೆಗೆ ಕಲ್ಲಾಗುವ ಶಾಪ ಕೊಟ್ಟರು. ಅದೇ ತಪ್ಪು ಮಾಡಿದ್ದ ಇಂದ್ರನಿಗೆ ಮಾತ್ರ ಯಾವ ಶಾಪವೂ ಇಲ್ಲ. ಇದ್ಯಾಕೆ ಹೀಗೆ? ಇಂದ್ರನಿಗೂ ಶಿಕ್ಷೆ ಆಗಬೇಕಿತ್ತಲ್ವಾ? ನಿಜ ಹೇಳಬೇಕೆಂದರೆ ಮುಗ್ಧೆ ಅಹಲ್ಯೆಗೆ ಮೋಸ ಮಾಡಿದ್ದಕ್ಕಾಗಿ ಇಂದ್ರ ಕಲ್ಲಾಗಬೇಕಿತ್ತು. ಆದರೆ ಅಹಲ್ಯೆ ಕಲ್ಲಾದಳು. ಇದಕ್ಕೆ ಕಲಿಯುಗದಲ್ಲಾದರೂ ನ್ಯಾಯ ದೊರೆಯುವುದೇ? ಶಾರ್ಟ್ ಮೂವಿ ಕಥೆ ಹೀಗಿದೆ. ಅರ್ಜುನ್ ಎಂಬ ವ್ಯಕ್ತಿ‌ ಕಾಣೆಯಾಗಿರುವ ಸಂಬಂಧವಾಗಿ, ವಿಚಾರಣೆಗೆಂದು ಪೊಲೀಸ್ ಆಫೀಸರ್ ಇಂದ್ರನು ವಯೋವೃದ್ಧ ಕಲಾವಿದನಾದ ಗೌತಮ್ ಸಾಧುರವರ ಮನೆಗೆ ಬರುತ್ತಾನೆ. ಅಲ್ಲಿ ಗೌತಮ್ ಸಾಧುರವರ ಪ್ರಾಯದ ಹೆಂಡತಿ ಅಹಲ್ಯಾ ಪೊಲೀಸನನ್ನು ಸ್ವಾಗತಿಸುತ್ತಾಳೆ. ಹೆಸರುಗಳನ್ನು ಗಮನಿಸಿ. ವಯಸ್ಸಾದ ಗಂಡನ ಹೆಸರು ಗೌತಮ ಹಾಗೂ ವಿಚಾರಣೆಗೆ ಬಂದ ಅಧಿಕಾರಿ ಇಂದ್ರ. ಗೌತಮನ ಪ್ರಾಯದ ಹೆಂಡತಿಯ ಹೆಸರು ಅಹಲ್ಯಾ.... !!! ಮೇಲೆ ಹೇಳಿದ ಪೌರಾಣಿಕ ಕಥಾವಸ್ತುವಿಂತೆ ಇದೆಯಲ್ವಾ..?? ಹೌದು... ಇದೂ ಅದೇ ಥರ. ಪೊಲೀಸ್ ಇಂದ್ರನಿಗೆ ಅಲ್ಲೊಂದು ವಿಶೇಷ ಕಾಣುತ್ತದೆ. ಏನೆಂದರೆ.... ಆ ಮನೆಯಲ್ಲಿ ನಿಜವಾದ ಮನುಷ್ಯರನ್ನು ಹೋಲುವಂತಹ ಗೊಂಬೆಗಳು ಕಾಣಸಿಗುತ್ತವೆ.‌ ಒಂದು ಗೊಂಬೆ ಅಂತೂ ಈಗ ಕಳೆದುಹೋಗಿರುವ ಅರ್ಜುನನನ್ನೇ ಹೋಲುತ್ತಿರುತ್ತದೆ.‌ ಅಷ್ಟರಲ್ಲಿ ಅಹಲ್ಯೆ ಟೀ ...

ಆಕ್ಟ್ 1978 (ಕನ್ನಡ) ಸಿನೆಮಾ ವಿಮರ್ಶೆ

Image
  ನಿರ್ದೇಶನ: ಮಂಸೋರೆ ನಮ್ಮೆಲ್ಲರೊಳಗೂ ಒಂದು ತಣ್ಣನೆಯ ಆಕ್ರೋಶವಿದೆ. ಆ ಆಕ್ರೋಶ ಸಮಾಜದ ಬಗ್ಗೆ ಇರಬಹುದು.‌. ವ್ಯವಸ್ಥೆಯ ಬಗ್ಗೆ ಇರಬಹುದು.. ತನಗೆ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಅಥವಾ ಸಿಗದಿರುವ ಗೌರವದ ಬಗ್ಗೆ ಇರಬಹುದು.. ನಮ್ಮೊಳಗೆ ಗುಪ್ತಗಾಮಿನಿಯಂತೆ ಮಂದಗತಿಯಲ್ಲಿ ಅದು ಹರಿಯುತ್ತಲಿದೆ. ಆಗಾಗ ನಮ್ಮ ಅಸಹನೆ ಹೆಚ್ಚಾಗಿ ಆಕ್ರೋಶ ಸಿಡಿದೇಳಲು ಹೊರಟರೂ, ನಮ್ಮ ಬದುಕಿನ ಚಿಕ್ಕ-ಪುಟ್ಟ ಖುಷಿಗಳು ಆ ಆಸ್ಫೋಟವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತವೆ. ಮಧ್ಯಮ ವರ್ಗದವರ ಬದುಕೇ ಇಷ್ಟು. ಇದ್ದಂತೆ ಇರಲಾರರು... ಆಸೆ ಪಟ್ಟದ್ದನ್ನು ಪಡೆಯಲಾರರು.. ಇಷ್ಟೆಲ್ಲಾ ಕಷ್ಟದ ನಡುವೆಯೂ, ಇಷ್ಟವಿಲ್ಲದ ಜೀವನವನ್ನು ಯಾವುದೋ ಭರವಸೆಯ ಮೇರೆಗೆ ನಡೆಸಿಕೊಂಡು ಹೋಗುತ್ತಿರುವವರ ಜೀವನದಲ್ಲಿ, ಹಠಾತ್ತನೆ ಒಂದು ದುರ್ಘಟನೆ ನಡೆದುಬಿಟ್ಟರೆ ಅವರ ಗತಿಯೇನು? ಗರ್ಭಿಣಿ ಗೀತಾ ತನ್ನ ಯಾವುದೋ ಒಂದು ಕೆಲಸಕ್ಕಾಗಿ ಸರ್ಕಾರಿ ಕಛೇರಿಗೆ ತಿಂಗಳಾನುಗಟ್ಟಲೆ ಎಡತಾಕುವಾಗ ಅವಳಲ್ಲಿಯೂ ಈ ರೀತಿಯ ಆಕ್ರೋಶ ಮಡುಗಟ್ಟುತ್ತಲೇ ಇರುತ್ತದೆ. ಯಾವುದೋ ಒಂದು ಹಂತದಲ್ಲಿ ಸ್ಫೋಟವೂ ಆಗುತ್ತದೆ. ಪರಿಣಾಮವೇ ಆಕೆ ಹ್ಯೂಮನ್ ಬಾಂಬ್ ಆಗಿ ಆ ಕಛೇರಿ ಪ್ರವೇಶಿಸಿ ಎಲ್ಲರಿಗೂ ಪಾಠ ಕಲಿಸುವ ನಿರ್ಧಾರ ಮಾಡುತ್ತಾಳೆ. ಈ ಸಂದರ್ಭದಲ್ಲಿ ಗೀತಾ ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತಿದ್ದಿರಬಹುದು? ಉಹುಂ.... ನಿರ್ದೇಶಕರು ಹೇಳುವುದೇ ಬೇಡ. ನಮಗೆ ಮೊದಲೇ ಗೊತ್ತಿದೆ.‌ ಯಾಕೆಂದರೆ ನಾವೂ ಇದೇ ವ್ಯ...

ಅರಿಷಡ್ವರ್ಗ (ಕನ್ನಡ) ಸಿನೆಮಾ ವಿಮರ್ಶೆ

Image
  ನಿಧಾನವಾಗಿ ಕನ್ನಡ ಚಿತ್ರರಂಗ ನಾಯಕ ಪ್ರಧಾನ ಚಿತ್ರಗಳಿಂದ ದೂರ ಸರಿಯುತ್ತಿರುವ ಸ್ಪಷ್ಟ ಸೂಚನೆ ದೊರಕುತ್ತಿರುವ ಈ ಸಂದರ್ಭದಲ್ಲಿ "ಅರಿಷಡ್ವರ್ಗ" ಸಿನೆಮಾ ಒಂದು ಜೀವಂತ ಉದಾಹರಣೆ ಎನಿಸುತ್ತದೆ.‌ ಕಥೆಯೇ ಮುಖ್ಯವಾಗಿ ತಥಾಕಥಿತ ಸಿನೆಮಾ ಸಿದ್ಧಾಂತಗಳೆಲ್ಲ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿವೆ. ಇಂತಹಾ ಒಂದು ಬದಲಾವಣೆಯ ಗಾಳಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಬೇಕಿತ್ತು. "ಅರಿಷಡ್ವರ್ಗ" ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಮ್ಮ ಜೀವನ, ನಾವು ಬದುಕುತ್ತಿರುವ ರೀತಿ. ಹೊರಪ್ರಪಂಚದಲ್ಲಿ ಹೇಗೆ ನಾವು ಸಂವಿಧಾನಕ್ಕೆ ಅನುಗುಣವಾಗಿ ಬದುಕುತ್ತಿದ್ದೇವೆಯೋ, ಹಾಗೆಯೇ ಕೌಟುಂಬಿಕ ಜೀವನದಲ್ಲಿ "ಅರಿಷಡ್ವರ್ಗ"ದ ದಾಸರಾಗಿದ್ದೇವೆ. ಈ ಆರು ಗುಣಗಳಿಂದ ಅತೀತನಾದ ಮನುಷ್ಯ ಇಲ್ಲವೇ ಇಲ್ಲ. ಹಾಗಾಗಿ ಇದು ನಮ್ಮದೇ ಕಥೆ. ಒಂದು ಕೊಲೆಯಾಗಿದೆ. ಆ ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣವೇನು? ನಿರ್ದೇಶಕರಿಗೆ ಗೊತ್ತಿದೆ ಕೊಲೆ ಮಾಡಿದವರು ಯಾರೆಂದು. ಅದನ್ನು ಅವರು ನಮಗೆ ಬಹಳ ವಿಭಿನ್ನವಾದ ರೀತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಈ ಶೈಲಿ ಕನ್ನಡಕ್ಕೆ ಬಹಳ ಹೊಸದಾಗಿದೆ. ಒಂದು ಕಡೆ ಕೆಲವು ಸನ್ನಿವೇಶಗಳು ತಾನೇತಾನಾಗಿ ಹುಟ್ಟಿ, ನಂತರ ಸ್ವಲ್ಪ ಸಮಯ ಕಳೆದ ನಂತರ ಆ ಸನ್ನಿವೇಶಗಳ ಹಿನ್ನೆಲೆ ತೋರಿಸುವಾಗ ಇಡೀ ಸಿನೆಮಾದ ದೃಶ್ಯಗಳು ಒಂದನ್ನೊಂದು ಬೆಸೆದುಕೊಂಡಿರುವಂತೆ ಎನಿಸುತ್ತದ...

Andriod Kunjappan ver 5.25 (ಮಲಯಾಳಂ)

Image
  ಮನುಷ್ಯ ಮತ್ತು ರೋಬಾಟ್... ಇವರಿಬ್ಬರಿಗೂ ಯಾವತ್ತಿಗೂ ಆಗಿಬರುವುದಿಲ್ಲ. ಕಾರಣವೇನೆಂದರೆ ರೋಬಾಟುಗಳಿಗೆ ಭಾವನೆಗಳಿಲ್ಲ ಎಂಬುದಷ್ಟೇ ಅಲ್ಲದೇ, ರೋಬಾಟುಗಳು ನಾವು ಹೇಳುವ ಮಾತಿನ ನಿಗೂಢಾರ್ಥ ತಿಳಿಯದೇ, ಹೇಳಿದ ಮಾತನ್ನು ಮಾತ್ರವೇ ಪಾಲಿಸುತ್ತವೆ ಎನ್ನುವುದು. ಆದರೆ ಮನುಷ್ಯನೋ... ಸೃಷ್ಟಿಯ ಏಕೈಕ ಮಾತನಾಡುವ ಪ್ರಾಣಿಯಾಗಿದ್ದರೂ ಏನು ಹೇಳಬೇಕೋ ಅದೊಂದನ್ನು ಬಿಟ್ಟು ಉಳಿದ ಎಲ್ಲವನ್ನೂ ಮಾತನಾಡಿರುತ್ತಾನೆ. ಅವನು/ ಅವಳು ಹುಂ ಎಂದರೆ ಇಲ್ಲ ಎಂದರ್ಥ, ಇಲ್ಲ ಎಂದರೆ ಹೂಂ ಎಂದರ್ಥ. ಒಳ್ಳೆಯದಾಗಲಿ ಅಂತ ಹೇಳಿದರೆ ನಿಜವಾಗಿ ಅದೇ ಅರ್ಥ ಇರುವುದಿಲ್ಲ. ವ್ಯಂಗ್ಯವೂ ಇರಬಹುದು. ಒಟ್ಟಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಮಾತುಗಳ ಅರ್ಥ ಬದಲಾಗುತ್ತಿರುತ್ತದೆ. ಇದನ್ನು ರೋಬೋಟುಗಳು ಅರ್ಥ ಮಾಡಿಕೊಳ್ಳಲಾರವು. ಉದಾಹರಣೆಗೆ ಸಾವು ಎಂಬ ಪದಪ್ರಯೋಗ. ಈ ಪದವನ್ನು ಎಷ್ಟು ಸಲೀಸಾಗಿ ಬಳಸುತ್ತೇವೆ. ಬಿಸಿಲಿಗೆ ಸತ್ತೋದೆ, ಛಳಿಗೆ ಸತ್ತೋದೆ, ಕಾದು ಕಾದು ಸತ್ತೋದೆ ಇತ್ಯಾದಿ. ನಮಗೆ ಆಗದವರು ಏನಾದರೂ ಅಂದರೆ ಹಿಂದೆ ಮುಂದೆ ಯೋಚಿಸದೇ 'ಒಂದ್ಕೆಲ್ಸ ಮಾಡು, ನನ್ನ ಸಾಯಿಸಿಬಿಡು' ಅಂತೀವಿ. ಹೇಗಿದ್ರೂ ಅವರು ಸಾಯಿಸೋಲ್ಲ ಅಂತ ಗೊತ್ತಿರುತ್ತೆ ನಮಗೆ. ಆದೇ ರೋಬಾಟಿಗೆ ಹಾಗೆ ಆಗೋಲ್ಲ. ಅದು ಹೇಳಿದ ಕೆಲಸ ಮಾತ್ರ ಮಾಡುವಂಥದ್ದು. ಸಿನೆಮಾದ ಆರಂಭದಲ್ಲಿಯೇ ಒಬ್ಬ ವೃದ್ಧನ ನೆರವಿಗೆ ಒಂದು ರೋಬಾಟ್ ಇರುವುದನ್ನು ನಾವು ನೋಡುತ್ತೇವೆ. ರೋಬೋ ಆ ವೃದ್ಧನಿಗೆ ಕಾಫಿ ಮಾಡಿ ತೆಗೆದುಕೊಂಡು ಹೋ...

Knight and Day (English Movie)

Image
  ಸುರಸುಂದರಾಂಗ ಹೀರೋ ಮತ್ತು ಮನಮೋಹಕ ಹೀರೋಯಿನ್... ಇವರಿಬ್ಬರಿದ್ದರೆ ಮತ್ತೇನು ಬೇಕು ಒಂದು ಸಿನೆಮಾಗೆ?? ಲಾಜಿಕ್-ಗೀಜಿಕ್ಕಿಗೆ ಮಣ್ಣು ಸುರಿಯ... ಇಬ್ಬರನ್ನೂ ನೋಡುತ್ತಾ ಕಣ್ತುಂಬಿಸಿಕೊಳ್ಳುತ್ತಿದ್ದರಾಯ್ತು... ಹೌದು... ಇದು ಉತ್ಪ್ರೇಕ್ಷೆಯಲ್ಲ!! ಸಿನೆಮಾದೊಳಗೆ ಏನು ನಡೆಯುತ್ತಿದೆ ಅಂತ ಶೀರ್ಷಾಸನ ಹಾಕಿ ಯೋಚಿಸಿದರೂ ಗೊತ್ತಾಗುವುದಿಲ್ಲ. ಆದರೂ ನಮ್ಮ ಕಣ್ಣುಗಳು ಪರದೆ ಬಿಟ್ಟು ಆಚೆ-ಈಚೆ ಅಲ್ಲಾಡುವುದಿಲ್ಲ. ಇದಕ್ಕೆ ಕಾರಣ ಬಿಗಿಯಾದ ನಿರೂಪಣೆ ಮತ್ತು ಹದವಾದ ಹಾಸ್ಯ. ಸಿನೆಮಾ ಶುರುವಾದ ಕೂಡಲೇ ಮುಗಿಯುವವರೆಗೂ ಅದೇ ವೇಗದಲ್ಲಿಯೇ ನೋಡಿಸಿಕೊಳ್ಳುತ್ತದೆ. ನಾಯಕಿ ಪೆದ್ದು. ಅಲ್ಲಲ್ಲ..‌ ಪೆದ್ದು ಅಂತ ಹೇಗೆ ಹೇಳುವುದು? ಅವಳು ನಮ್ಮನಿಮ್ಮೆಲ್ಲರಂತೆ ಸಾಮಾನ್ಯಳು. ನಾಯಕ ಹೇಳುವ ಮಾತುಗಳು ಯಾವುವೂ ಅವಳಿಗೆ ಅರ್ಥವಾಗೋಲ್ಲ. ಅದಕ್ಕೆ ನಾಯಕ ಹೇಳುವುದನ್ನೆಲ್ಲಾ ಕೇಳಿಸಿಕೊಂಡು, ಕೊನೆಗೆ ತನಗನ್ನಿಸಿದ್ದನ್ನು ಮಾಡುತ್ತಾಳೆ. ಮೊದಲೇ ಹೇಳಿದೆನಲ್ಲ ಅವಳು ಮುಗ್ಧಳು!!! ಆದರೆ ನಾಯಕ ಆಕೆಯನ್ನು, ಆಕೆಯ ಒಂದೊಂದು ನಡೆಯನ್ನೂ, ಆಕೆಯ ಡ್ರೆಸ್, ಆಕೆಯ ಸೌಂದರ್ಯ ಎಲ್ಲವನ್ನೂ ಹೊಗಳುತ್ತಾನೆ. ಆಕೆ ತನ್ನೆದುರು ನಡೆಯುತ್ತಿರುವ ಘಟನೆಗಳಿಂದ ವಿಚಲಿತಳಾಗಿ ಉಲ್ಟಾ-ಸೀದಾ ಮಾತನಾಡಿದಾಗ ಆತ ಅರ್ಥ ಮಾಡಿಕೊಳ್ಳುತ್ತಾನೆ. ಏಕೆಂದರೆ ಆತ ಅಸಾಮಾನ್ಯ. ಆಕೆ ಸಾಮಾನ್ಯಳು. ಸಿನೆಮಾದ ಮೊದಲಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ವಿಮಾನದಲ್ಲಿ ಒಂದೆಡೆ ಹೊರಟಿರುತ್ತಾರೆ. ನಾಯಕನ ಸೀಟ್ ...

Njan Mary Kutti (ಮಲಯಾಳಂ)

Image
  ಸಿನೆಮಾ ಶುರುವಿನಲ್ಲಿ ಒಬ್ಬ ಯುವಕ ಮನೆಯವರಿಗೆ ಒಂದು ಪತ್ರ ಬರೆದಿಟ್ಟು, ಮನೆ ಬಿಟ್ಟು ಹೋಗುತ್ತಿರುತ್ತಾನೆ. ಅರೆ!! ಮನೆಬಿಡಲು "ಕಾರಣ"ವೇನು ಅಂತ ನಾವು ಯೋಚಿಸುವಂತೆಯೇ ಇಲ್ಲ. ಏಕೆಂದರೆ ಮುಂದಿನ ದೃಶ್ಯದಲ್ಲಿ ಆ "ಕಾರಣ" ಕಣ್ಣಿಗೆ ರಾಚುತ್ತದೆ. ಅದು ಅವನಲ್ಲ ಅವಳು.....!!! ಅವನು ಅವಳಾಗುವುದು ಅಷ್ಟು ಸುಲಭವಲ್ಲ. ಮೊಟ್ಟಮೊದಲಿಗೆ ಮನೆಯವರ ವಿರೋಧ ಎದುರಿಸಬೇಕು. ನಂತರ ಬಂಧುಮಿತ್ರರ ಕುಹಕ... ನಂತರ ಸಮಾಜದ ತಿರಸ್ಕಾರ.. ಇದೆಲ್ಲವನ್ನೂ ಸಹಿಸುವ ಶಕ್ತಿಯಿದ್ದರೆ ಮಾತ್ರ ಅವನು ಅವಳಾಗಬಹುದು. ಚಿಕ್ಕಂದಿನಲ್ಲಿ ಎಲ್ಲರಿಗೂ ಶಾಲೆಯಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗದ ಜೊತೆ ನಪುಂಸಕ ಲಿಂಗವನ್ನೂ ಸಹ ಕಲಿಸಲಾಗುತ್ತದೆ. ಆದರೆ ಆ ಲಿಂಗದವರಿಗೂ ಮರ್ಯಾದೆ ಕೊಡಬೇಕು ಅಂತ ಮಾತ್ರ ಕಲಿಸಿರುವುದಿಲ್ಲ. ಇದು ನಿಜವಾಗಿ ಲಿಂಗ ತಾರತಮ್ಯದ ವಿಷಯ ಅಲ್ಲ. ಬದಲಿಗೆ ಇದು ಮನುಷ್ಯತ್ವದ ವಿಷಯ. ತೃತೀಯ ಲಿಂಗಿಗಳು ಒಂದೋ ವೇಶ್ಯಾವಾಟಿಕೆ ನಡೆಸುತ್ತಾರೆ ಅಥವಾ ಭಿಕ್ಷೆ ಬೇಡುತ್ತಾರೆ ಅಂತ ಜನ ಪೂರ್ವನಿರ್ಧಾರ ಮಾಡಿಕೊಂಡುಬಿಟ್ಟಿದ್ದಾರೆ. ಹಾಗಾಗಿ ತೃತೀಯ ಲಿಂಗಿಗಳನ್ನು ಕಂಡಾಗ ಅವರಿಗೆ ಬೇರೇನೂ ನೆನಪಾಗುವುದೇ ಇಲ್ಲ. ಅವರಿಗೂ ಮನಸ್ಸಿದೆ, ಆಸೆಯಿ್ದೆದೆ, ಕನಸಿದೆ... ಊಹೂಂ... ತೃತೀಯ ಲಿಂಗಿ ಎಂದರೆ ಜನರಿಗೆ ಆಡಿಕೊಳ್ಳುವ ಒಂದು ವಸ್ತು ಅಷ್ಟೇ. ಪೊಲೀಸರಂತೂ ಇವರುಗಳನ್ನು ಸಾಯುವಷ್ಟು ಪೀಡಿಸುತ್ತಾರೆ. ಅವಕಾಶ ಸಿಕ್ಕಷ್ಟು ಶೋಷಿಸುತ್ತಾರೆ. ಯಾಕೆ ಅಂತೀರ?...

Interstellar (English Movie)

Image
 [Direction: Christopher Nolan] (ಇಂಗ್ಲೀಷ್ ಸಿನೆಮಾ ನಾ ಕಂಡಂತೆ) ಮನೆಯಲ್ಲಿ ಒಂಟಿಯಾಗಿರುತ್ತೀರಿ. ಒಂದು ಸಣ್ಣ ಪುಸ್ತಕದ ಪುಟ ತೆರೆಯುವ ಶಬ್ದವೂ ರೋಡ್ ರೋಲರಿನಂತೆ ಕೇಳಿಸುವಷ್ಟು ನಿಶ್ಯಬ್ದ ಆವರಿಸಿರುತ್ತದೆ. ಆಗ ದಿಢೀರನೆ ಮೇಜಿನ ಮೇಲಿಂದ ಯಾವುದೋ ವಸ್ತು ಅಥವಾ ಪುಸ್ತಕದ ರ‌್ಯಾಕಿನಿಂದ ಒಂದು ಪುಸ್ತಕ ದಭಾಲನೆ ಬಿದ್ದರೆ ಹೇಗಾಗಬಹುದು?? ಆಗೋದೇನು? ಹೃದಯ ಒಡೆದು ಹೋಗುವುದೊಂದು ಬಾಕಿ. ಕಣ್ಣಿಗೆ ಕಾಣದ ಯಾವುದೇ ಶಕ್ತಿಯನ್ನು ನಾವು ಭೂತ ಎಂದೇ ತಿಳಿಯುತ್ತೇವೆ. ಉದಾಹರಣೆಗೆ ಬಾಹ್ಯ ಒತ್ತಡ ಇಲ್ಲದೇ ಯಾವ ವಸ್ತುವೂ ಚಲಿಸೋಲ್ಲ ಎನ್ನುವುದು ಸೈನ್ಸ್. ಅದೇ ರೀತಿ ಯಾವ ಒತ್ತಡವೂ ಇಲ್ಲದೇ ಪುಸ್ತಕಗಳು ತಾನೇ ತಾನಾಗಿ ಬೀಳತೊಡಗಿದಾಗ ಇದು ಭೂತದ ಚೇಷ್ಟೆಯೇ ಎಂಬ ತೀರ್ಮಾನಕ್ಕೆ ಬರುತ್ತೇವೆ. ನಾಯಕ ಕೂಪರ್‌ನ ಮುದ್ದು ಮಗಳಾದ ಮರ್ಫ್ ಸಹ ಇದನ್ನು ಮಾಡುತ್ತಿರುವುದು ಭೂತ ಅಂತಲೇ ತಿಳಿದಿರುತ್ತಾಳೆ. ಆದರೆ ಅವಳು ತನ್ನ ಕೊಠಡಿಯಲ್ಲಿ ಭೂತವಿದೆ, ಅದು ಪುಸ್ತಕ ಬೀಳಿಸುತ್ತಿದೆ ಅಂತ ಹೇಳಿದಾಗ ಯಾರೂ ಸಹ ನಂಬದೇ ಆಕೆಯ ಮಾತುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಮುರ್ಫ್ ಹೆದರದೇ ಇದನ್ನು ಪ್ರತಿನಿತ್ಯವೂ ಗಮನಿಸುತ್ತಿರುತ್ತಾಳೆ. ಅದರ ಪ್ರಕಾರ ರ‌್ಯಾಕಿನ ಪುಸ್ತಕಗಳು ಪ್ರತಿದಿನ ಒಂದು ವ್ಯವಸ್ಥಿತ ರೂಪದಲ್ಲಿ ಬೀಳುತ್ತಿರುತ್ತದೆ. ಅಂದರೆ ಪುಸ್ತಕಗಳು ಯಾವುದೋ ಸಂಕೇತ ಕೊಡುತ್ತಿರುವ ಹಾಗೆ. ಇದರರ್ಥ ಭೂತ ಮಾತನಾಡಲು ಪ್ರಯತ್ನ ಪಡುತ್ತಿದೆ. ಏನೋ ಹೇಳ...

Inception (English Movie)

Image
(Inception ಇಂಗ್ಲಿಷ್ ಸಿನೆಮಾ ನಾ ಕಂಡಂತೆ) Inception ಅಂದರೆ ಪ್ರಾರಂಭ..... ಯಾವುದರ ಪ್ರಾರಂಭ? ನಮ್ಮ ಯೋಚನೆಯ ಪ್ರಾರಂಭ.. ಹೌದು.. ಸಿನೆಮಾ ಮುಗಿಯುತ್ತದೆ... ಆದರೆ ನಮ್ಮ ಯೋಚನೆ ಶುರುವಾಗುತ್ತದೆ.. ಹೀಗೂ ಇರಬಹುದಾ.........? ಇರಬಹುದೇನೋ....................? ಯಾಕಿರಬಾರದು............................? ಒಂದು ವೇಳೆ ಇದು ನಿಜವಾಗಿದ್ದರೆ ನಮ್ಮ ಜೀವನದ ಅರ್ಥವೇ ಬದಲಾಗುತ್ತದೆಯಲ್ಲವೇ.......? ಹೀಗೆ ನಮ್ಮ ಯೋಚನಾ ಸರಣಿ ಸಾಗುತ್ತದೆ‌. ಎಲ್ಲಿಯವರೆಗೆ ಯೋಚಿಸುತ್ತೇವೆ ಎಂದರೆ ಬಹುಶಃ ನಮ್ಮ ಜೀವ-ಜೀವನ ಇರುವವರೆಗೂ‌ ಈ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ.... ಇದು ಆ ನಿರ್ದೇಶಕನ‌ ತಾಕತ್ತು. ಒಂದು ಆಲೋಚನೆಯನ್ನು ಯಶಸ್ವಿಯಾಗಿ ನಮ್ಮೆಲ್ಲರ ತಲೆಗೆ ದಾಟಿಸಿ ಅದನ್ನು ನಮ್ಮೊಳಗೇ ಬೇರೂರಿಸುವಲ್ಲಿ ಸಫಲರಾಗಿದ್ದಾರೆ. ಈಗ ನಿರ್ದೇಶಕರ ಆಲೋಚನೆ ನಮ್ಮ ತಲೆಗೆ ಬಂದು ನಮ್ಮದೇ ಯೋಚನೆ ಎನಿಸುವಷ್ಟು ಆಪ್ತವಾಗಿದೆ. ಇದನ್ನೇ ಕಥಾನಾಯಕನೂ ಮಾಡುವುದು. ಮೂಲತಃ ಕಥಾನಾಯಕ ಕನಸಿನ ಮೂಲಕ ಮತ್ತೊಬ್ಬರ ಆಲೋಚನೆಗಳಲ್ಲಿ ಅಡಗಿರಬಹುದಾದ ರಹಸ್ಯಗಳನ್ನು ಕಂಡುಹಿಡಿಯುವವನಾದರೂ, ಅದೇ ಮಾರ್ಗದಲ್ಲಿ ತನ್ನ ಆಲೋಚನೆಯನ್ನು ಮತ್ತೊಬ್ಬರ ಸುಪ್ತ ಮನಸ್ಸಿನಲ್ಲಿ ಬಿತ್ತುವ ಕಾರ್ಯವನ್ನೂ ಸಹ ಮಾಡುತ್ತಾನೆ. ಒಂದ್ನಿಮಿಷ..... ಮೇಲಿನ ಪ್ಯಾರಾ ಅರ್ಥ ಆಗಲಿಲ್ಲ ಅನ್ಸುತ್ತೆ. ನಮ್ಮ ಕಥಾನಾಯಕನ ಪ್ರೊಫೆಷನ್ ಅದು. ಒಬ್ಬರ ಕನಸಿನೊಳಗೆ ಪ್ರವೇಶಿಸಿ, (ಅದಕ್ಕ...