Posts

13B (ಹಿಂದಿ)

Image
  ಸಿನೆಮಾ ಎಂದರೆ ಹೇಗಿರಬೇಕು? ಕೈಯಲ್ಲಿ ಪಾಪ್ ಕಾರ್ನ್ ಹಿಡಿದು ಕೂತರೆ ತಿನ್ನುತ್ತಿರುವುದೂ ನಮ್ಮರಿವಿ್ಗಗೆ ಬರಬಾರದು ಹಾಗಿರಬೇಕು. ಉಸಿರಾಡುತ್ತಿದ್ದೇವೆಯೋ ಇಲ್ಲವೋ ಎನಿಸುವಷ್ಟು ಸಿನೆಮಾದೊಳಗೆ ತಲ್ಲೀನರಾಗಬೇಕು. ಅಂತಹಾ ಒಂದು ಸಿನೆಮಾ ನೋಡಬೇಕೆನ್ನುವುದು ನಮ್ಮೆಲ್ಲರ ಆಸೆಯಾಗಿರುತ್ತದೆ. 13B ನೋಡುತ್ತಿದ್ದರೆ ನನಗೆ ಇದೇ ಅನುಭವವಾಯ್ತು. ಹೊಸದಾಗಿ 13B ಫ್ಲಾಟಿಗೆ ಒಂದು ಕುಟುಂಬ ಬರುತ್ತದೆ. ಅಂದೇ ಒಂದು ಹೊಸಾ ಸೀರಿಯಲ್ ಸಹ ಶುರುವಾಗುತ್ತದೆ. ಆ ಸೀರಿಯಲ್ ಕಥೆ ಇವರ ಮನೆ ಕಥೆಯ ರೀತಿಯೇ ಇರುತ್ತದೆ. ಆದರೆ ಮೊದಲಿಗೆ ಯಾರೂ ಅದನ್ನು ಗಮನಿಸುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲಿಯೇ ನಾಯಕನಿಗೆ ಈ ವಿಷಯ ಗೊತ್ತಾಗುತ್ತದೆ. ಮನೆಯಲ್ಲಿ ನಡೆಯುವ ಘಟನೆ ಆ ದಿನದ ಎಪಿಸೋಡಿನಲ್ಲಿ ಮೊದಲೇ ಗೊತ್ತಾಗಲು ತೊಡಗುತ್ತದೆ. ಇದನ್ನರ್ಥ ಮಾಡಿಕೊಂಡ ನಾಯಕ ತಾನೂ ಸೀರಿಯಲ್ ನೋಡಲು ತೊಡಗುತ್ತಾನೆ.‌ ಅಂದಂದಿನ ಎಪಿಸೋಡ್ ಗಮನಿಸಿ ಅದರಂತೆ ತನ್ನ ಮನೆಯವರನ್ನು ಮುಂದಾಗಬಹುದಾದ ಪ್ರಮಾದಗಳಿಂದ ಕಾಪಾಡುತ್ತಿರುತ್ತಾನೆ. ತಾನು ಮನೆಗೆ ಬರದೇ ಇದ್ದಂತಹ ದಿನಗಳಲ್ಲಿ ಅಮ್ಮನಿಗೋ ಹೆಂಡತಿಗೋ ಫೋನ್ ಮಾಡಿ ಇವತ್ತು ಸೀರಿಯಲ್ಲಿನಲ್ಲಿ ಏನಾಯ್ತು ಅಂತ ವಿಚಾರಿಸುತ್ತಿರುತ್ತಾನೆ. ಇದನ್ನು ನೋಡಿ ಅವರು ಇವನೂ ಸೀರಿಯಲ್ಲಿಗೆ ಅಡಿಕ್ಟ್ ಆದ ಅಂತ ಅವನನ್ನು ಆಡಿಕೊಳ್ಳುತ್ತಾರೆ. ಅತ್ಯಂತ ವೇಗದ ನಿರೂಪಣೆ, ನಮ್ಮ ಊಹೆಗೂ ಮೀರಿದ ಕಥಾವಸ್ತುಗಳಿಂದ ಸಿನೆಮಾ ಮುಂದೋಡುವುದೇ ಗೊತ್ತಾಗುವುದಿಲ್ಲ. ಹಾ...

"Escape from Taliban" (ಹಿಂದಿ)

Image
ಹೆಣ್ಣಿನ ಶೋಷಣೆಯ ಅತ್ಯಂತ ಕರಾಳ ಮುಖವಿರುವ ಸಿನೆಮಾ ಇದು. ಅದಷ್ಟೇ ಅಲ್ಲದೇ ಇದು "ಸುಷ್ಮಿತಾ ಬ್ಯಾನರ್ಜಿ" ಎನ್ನುವವರ ಆತ್ಮಕಥೆಯೂ ಸಹ ಆಗಿದೆ. ಅವರು ಬರೆದಿರುವ ತಮ್ಮದೇ ಜೀವನದ ಕಥೆಯನ್ನು ಇಲ್ಲಿ ಸಿನೆಮಾವನ್ನಾಗಿಸಲಾಗಿದೆ. ವಿಪರ್ಯಾಸ ಎಂದರೆ ಇದರ ಲೇಖಕಿಯನ್ನು 2013 ರಲ್ಲಿ ಹತ್ಯೆಗೈಯ್ಯಲಾಗಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮುಖ್ಯವಾದ ಕಾರಣ ಆಕೆ ಸಂಪ್ರದಾಯದ ಪ್ರಕಾರ ಬುರ್ಖಾ ತೊಡುತ್ತಿರಲಿಲ್ಲ ಎನ್ನುವುದು. 1989 ರಲ್ಲಿ ಸುಷ್ಮಿತಾ ಬ್ಯಾನರ್ಜಿ ಎಂಬ ಸಂಪ್ರದಾಯಸ್ಥ ಮನೆತನದ ಯುವತಿ, ಆಫ್ಘಾನಿಸ್ತಾನದ ವ್ಯಾಪಾರಿ ಜಾನಬಾಜ ಖಾನ್ ಎಂಬುವವರನ್ನು ಮದುವೆಯಾಗಿ ಆತನ ಜೊತೆ ಆಫ್ಘಾನಿಗೆ ಕಾಲಿಟ್ಟ ನಂತರ ಆಕೆಯ ಜೀವನದ ದುರಂತದ ಸರಮಾಲೆಗಳು ಬಿಚ್ಚಿಕೊಳ್ಳುತ್ತವೆ. ಆಕೆ ಅಲ್ಲಿನ ರೀತಿ-ಕಟ್ಟಲೆಗಳನ್ನು ಸಹಿಸಿಕೊಂಡು ಹೇಗೋ ಬದುಕುತ್ತಿದ್ದಳೇನೋ? ಆದರೆ ಅಷ್ಟರಲ್ಲಿಯೇ ಒಂದು ಆಘಾತಕರ ವಿಷಯ ಅವಳಿಗೆ ಗೊತ್ತಾಗುತ್ತದೆ. ಏನೆಂದರೆ..... ಆಕೆಯ ಪತಿ ಜಾನಬಾಜ ಖಾನನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಒಂದು ಮಗುವೂ ಇರುತ್ತದೆ.‌ ಇದನ್ನು ತಿಳಿದು ಅವಳ ಜಂಘಾಬಲವೇ ಉಡುಗಿ ಹೋಗುತ್ತದೆ. ಆದರೆ ಆಕೆಯ ಪತಿಯಾಗಲಿ ಅಥವಾ ಆ ಮನೆಯವರಿಗಾಗಲಿ ಇದೊಂದು ದೊಡ್ಡ ವಿಷಯವೇ ಆಗಿರುವುದಿಲ್ಲ. ಇವಳು ಈ ವಿಷಯವಾಗಿ ಮಾಡುವ ಗಲಾಟೆ ಅವರಿಗೆ ಕ್ಷುಲ್ಲಕವಾಗಿ ಕಾಣುತ್ತದೆ.‌ ಆಫ್ಘನ್ ಮಹಿಳೆಯರಿಗೆ ಆ ದೇಶದಲ್ಲಿ ಯಾವ ರೀತಿಯಾದ ಸ್ವಾತಂತ್ರವೂ ಇರುವುದಿಲ್ಲ. ವಿದ್ಯೆ...

"ಏಜೆಂಟ್ ಸಾಯಿ ಶ್ರೀನಿವಾಸ ಅತ್ರೇಯ" (ತೆಲುಗು)

Image
  ಹೆಸರೇ ಹೇಳುತ್ತದೆ ಸಿನೆಮಾದ ಕಥೆ ಏನೆಂದು. ಇದರಲ್ಲಿ ನಾಯಕ ಒಬ್ಬ ಡಿಟೆಕ್ಟೀವ್. ಅವನಿಗೊಬ್ಬ ಯುವತಿ ಅಸಿಸ್ಟೆಂಟ್. ಈತ ತನ್ನ ಅಸಿಸ್ಟೆಂಟ್ ಮುಂದೆ ತಾನು ಹಾಗೆ, ಹೀಗೆ ಅಂತ ಜಂಭ ಕೊಚ್ಚುತ್ತಾ ಇರುತ್ತಾನೆ. ಆದರೆ ವಾಸ್ತವವಾಗಿ ಹಾಗಿರದೇ ಜನರ ಮುಂದೆ ಅಪಹಾಸ್ಯಕ್ಕೆ ಈಡಾಗುತ್ತಾ ಇರುತ್ತಾನೆ. ಏನೇ ಆದರೂ ಆತನ ಟ್ಯಾಲೆಂಟ್‌ ಮೆಚ್ಚತಕ್ಕದ್ದು. ಆತನ ಪ್ರತಿಭೆಯನ್ನು ನಾವೂ ಸಹ ಒಪ್ಪಿಕೊಳ್ಳುವಂತಹಾ ಎರಡು ಮೂರು ಇನ್ಸಿಡೆಂಟುಗಳೂ ಸಹ ನಡೆಯುತ್ತವೆ. ಆದರೆ ಪೊಲೀಸರು ಮಾತ್ರ ಇವನನ್ನು ಕ್ರೈಂ ಸೀನಿನಿಂದ ಒದ್ದು ಆಚೆ ಕಳಿಸುತ್ತಿರುತ್ತಾರೆ. ಇವನು ಚೂರೂ ಸಹ ಬೇಜಾರು ಮಾಡಿಕೊಳ್ಳದೇ ತನ್ನ ತನಿಖೆ ಮುಂದುವರೆಸುತ್ತಾ ಇರುತ್ತಾನೆ. ಹೀಗೆಯೇ ಜೀವನ ಮೂರಕ್ಕಿಳಿಯದೇ ಆರಕ್ಕೇರದೇ ಸಾಗುತ್ತಿರುತ್ತದೆ. ಹೆಚ್ಚುಕಡಿಮೆ ಅರ್ಧ ಗಂಟೆಯವರೆ್ಗೂಗೂ ಹೀಗೆಯೇ ಹಾಸ್ಯಮಯವಾಗಿ ಸಾಗುತ್ತಿರುವ ಕಥೆ ನಂತರ ದಿಢೀರನೇ ಗಂಭೀರವಾದ ತಿರುವು ತೆಗೆದುಕೊಂಡುಬಿಡುತ್ತದೆ. ಯಾರೂ ಊಹಿಸಿಯೂ ಇರದ ತಿರುವು !!!! ಒಮ್ಮೆ ನಾಯಕನ ಸ್ನೇಹಿತನಾದ ಸಿರೀಶ್ ರೈಲ್ವೇ ಟ್ರಾಕುಗಳ ಪಕ್ಕ ಸಿಗುತ್ತಿರುವ ನಿಗೂಢ ಹೆಣಗಳ ಬಗ್ಗೆ ಹೇಳುತ್ತಾನೆ. 'ಆ ಹೆಣಗಳು ಯಾವುವು? ಎಲ್ಲಿಯವು? ಒಂದೂ ಗೊತ್ತಾಗಿಲ್ಲ. ಆದರೆ ಆಗಾಗ ಐದಾರು ಹೆಣಗಳು ಸಿಗುತ್ತಲೇ ಇರುತ್ತವೆ' ಎಂದು ಹೇಳುತ್ತಾನೆ. ನಾಯಕನಿಗೆ ಒಂದು ನಂಬಿಕೆ ಇರುತ್ತದೆ. ಏನೆಂದರೆ... ಇಂದಲ್ಲ ನಾಳೆ ತಾನು ದೊಡ್ಡದೊಂದು ಕೇಸ್ ಸಾಲ್ವ್ ಮಾಡಿ ಫೇಮಸ್ ಆಗ...

"ತುಮ್ಹಾರಿ ಸುಲು" (ಹಿಂದಿ)

Image
  ಹೆಸರು ಕೇಳಿ ಇದ್ಯಾವ ಭಾಷೆಯೋ ಎಂದುಕೊಳ್ಳದಿರಿ. 'ಸುಲು' ಎಂದರೆ ಸುಲೋಚನಾ. ಅವಳೇ ನಮ್ಮ ನಾಯಕಿ. ಅತ್ಯಧಿಕ ಆತ್ಮವಿಶ್ವಾಸ ಇರುವ, ಏನು ಕೂಡ ಸಾಧಿಸಬಲ್ಲೆ ಎಂಬ ಛಲ ಇರುವ, ನಿರಂತರ ಕಲಿಕೆಯ ಹಸಿವಿರುವ ಸುಲೋಚನಾ!! ಆದರೆ ಅಕಾಡೆಮಿಕ್ ಆಗಿ ಆಕೆ ಸೋತವಳು. ಅಂದರೆ ಅವಳು ಟೆನ್ತ್ ಫೇಲ್. ಹೈಸ್ಕೂಲ್ ಸಹ ಪಾಸ್ ಮಾಡಲಾಗದ ಸುಲೋಚನಾ ಬೇರೇನೂ ಸಾಧಿಸಲಾಗದೇ ಗೃಹಿಣಿಯಾಗಿ ಬಾಳುತ್ತಿರುತ್ತಾಳೆ. ಆದರೆ ಮಕ್ಕಳ ಸ್ಕೂಲಿನಲ್ಲಿ, ಹೌಸಿಂಗ್ ಸೊಸೈಟಿಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತರುತ್ತಾ ತನ್ನನ್ನು ತಾನು ಉತ್ಸಾಹದ ಚಿಲುಮೆಯಾಗಿಸಿಕೊಂಡಿರುತ್ತಾಳೆ. ಆಕೆಯ ಗಂಡ ಒಂದು ಪ್ರೈವೇಟ್ ಕಂಪನಿಯಲ್ಲಿ ಮ್ಯಾನೇಜರ್. ಆಕೆಯೇ ಹೇಳುವ ಪ್ರಕಾರ ಹಸುವಿನಂತಹವನು. ಹೆಂಡತಿಯ ಯಾವ ಮಾತಿಗೂ ಇಲ್ಲ ಅಂದವನಲ್ಲ, ಆಕೆಯ ಯಾವುದೇ ಸಾಹಸ ಕಾರ್ಯಕ್ಕೂ ಬೇಡ ಅಂದವನೂ ಅಲ್ಲ. ಒಬ್ಬರೂ ಅನ್ಯೋನ್ಯವಾಗಿಯೇ ಇರುತ್ತಾರೆ. ಇಂತಹಾ ಸುಲೋಚನಾಳಿಗೆ ಒಮ್ಮೆ ಒಂದು ರೇಡಿಯೋ ಸ್ಟೇಷನ್ನಿಂದ ಬಹುಮಾನ ಗೆದ್ದಿರುವ ಬಗ್ಗೆ ಫೋನ್ ಬರುತ್ತದೆ. ಬಹುಮಾನ ತರಲು ಹೋದವಳಿಗೆ ಅಲ್ಲೊಂದು ಪೋಸ್ಟ್ ಕಾಣಸಿಗುತ್ತದೆ. ಏನೆಂದರೆ ಯಾರು ಬೇಕಾದರೂ ರೇಡಿಯೋ ಜಾಕಿ ಆಗಬಹುದು ಅಂತಿರುತ್ತದೆ. ಈಕೆ ಸೀದಾ ರೇಡಿಯೋ ಸ್ಟೇಷನ್ ಓನರ್ ಬಳಿ ಹೋಗಿ ತನಗೊಂದು ಚಾನ್ಸ್ ಕೊಡುವಂತೆ ಕೇಳುತ್ತಾಳೆ.‌ ಹೇಗೋ ಮಾಡಿ ಆ ಕೆಲಸ ಗಿಟ್ಟಿಸಿಕೊಂಡೂ ಬಿಡುತ್ತಾಳೆ. ನೀವೇ ಯೋಚಿಸಿ.... ಆಕೆ ಟೆನ್ತ್ ಫೇಲ್. ವೈಟ್ ಕಾಲರ್...

"ವಿ" (ಕನ್ನಡ)

Image
  ಇದು ತೆಲುಗಿನ ಚಿತ್ರವಾದರೂ ಸಹ ಕನ್ನಡದಲ್ಲಿ ಅಚ್ಚುಕಟ್ಟಾಗಿ ಡಬ್ ಆಗಿ ಮೂಡಿಬಂದಿದೆ. ನಟ-ನಟಿಯರೆಲ್ಲ ತೆಲುಗಿನವರು. ಆದರೆ ಚಿತ್ರ ಕನ್ನಡದ್ದೇ ಎಂಬ ಆಪ್ತತೆ ಕೊಡುತ್ತದೆ. ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬ ನಾಯಕ. ಮತ್ತೊಬ್ಬ ಪ್ರತಿನಾಯಕ. ಅಭಿನಯದಲ್ಲಿ ಇಬ್ಬರೂ ಸಮನಾದ ಪೈಪೋಟಿ ನೀಡಿದ್ದಾರೆ. ಜೊತೆಗೆ ಇಬ್ಬರು ನಾಯಕಿಯರೂ ಸಹ ಮುದ್ದಾಗಿದ್ದಾರೆ. ಕಥೆಯೇನು ಅಂದ್ರಾ? ಹೀರೋ ಒಬ್ಬ ಪೊಲೀಸ್ ಆಫೀಸರ್. ಒಂದು ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಎಂಬ ಕಾರಣಕ್ಕೆ ಆತನಿಗೆ ಸರ್ಕಾರದಿಂದ ಗ್ಯಾಲಂಟ್ರಿ ಅವಾರ್ಡ್ ಸಿಗುತ್ತದೆ. ಆದರೆ ಆ ಅವಾರ್ಡ್ ಸಿಕ್ಕ ಕಾರಣಕ್ಕಾಗಿಯೇ ಪ್ರತಿನಾಯಕ ನಾಯಕನಿಗೆ ಒಂದು ಟಾಸ್ಕ್ ಕೊಡುತ್ತಾನೆ. ತಾನು ಐದು ಕೊಲೆ ಮಾಡುವುದಾಗಿಯೂ, ಅದನ್ನು ತಡೆದರೆ ನಾಯಕ ಆ ಅವಾರ್ಡಿಗೆ ಅರ್ಹನೆಂದೂ, ಒಂದು ವೇಳೆ ಕೊಲೆಗಳನ್ನು ಅವನಿಂದ ತಡೆಯಲು ಆಗದಿದ್ದರೆ ನಾಯಕ ಗ್ಯಾಲಂಟ್ರಿ ಅವಾರ್ಡ್ ಅನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕೆಂದು ಚಾಲೆಂಜ್ ಮಾಡುತ್ತಾನೆ. ನಾಯಕ ಈ ಚಾಲೆಂಜ್ ಅನ್ನು ಸ್ವೀಕರಿಸುತ್ತಾನೆ. ಆದರೆ ನಾಯಕನಿಂದ ಆ ಕೊಲೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿಯೂ ಪ್ರತಿನಾಯಕನೇ ಗೆಲ್ಲುತ್ತಾ ಹೋಗುತ್ತಾನೆ. ಕಡೆಗೆ ಐದನೇ ಕೊಲೆಯೂ ನಡೆದುಬಿಡುತ್ತದೆ. ನಾಯಕ ಕೂಡಲೇ ಪ್ರೆಸ್ ಮೀಟ್ ಕರೆದು ಸರ್ಕಾರ ತನಗೆ ಕೊಟ್ಟಿದ್ದ ಅವಾರ್ಡ್ ವಾಪಸ್ ಮಾಡಿ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಾನೆ. ಹಾಗಾದರೆ ನಾಯಕ ಸೋ...

"ಅಶ್ವತ್ಥಾಮ" (ತೆಲುಗು)

Image
  ನಾಯಕ ತನ್ನ ತಂಗಿಯ ನಿಶ್ಚಿತಾರ್ಥಕ್ಕೆಂದು ಭಾರತಕ್ಕೆ ಬರುತ್ತಾನೆ. ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದು ಮದುವೆ ದಿನಾಂಕ‌ ಫಿಕ್ಸ್ ಆಗುತ್ತದೆ. ನಾಯಕಿಯ ತಂಗಿ ಅಂತೂ ತುಂಬಾ ಖುಷಿಯಲ್ಲಿ ಇರುತ್ತಾಳೆ. ಆ ರಾತ್ರಿ ಎಲ್ಲರೂ ಖುಷಿ-ಖುಷಿಯಿಂದ ನಿದ್ರಿಸುತ್ತಾರೆ. ಆದರೆ ಅದೇ ರಾತ್ರಿ ನಾಯಕನ ತಂಗಿ ಆತ್ಮಹತ್ಯೆಗೆ ಪ್ರತ್ನಿಸುತ್ತಾಳೆ....!!!! ನಾಯಕನಿಗೆ ಅದು ಗೊತ್ತಾಗಿ ಅದನ್ನು ತಡೆಯುತ್ತಾನೆ. ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೆ ಕಾರಣ ಆಕೆ ಗರ್ಭಿಣಿಯಾಗಿರುವುದು ಅಂತ ಅವಳು ಹೇಳುತ್ತಾಳೆ. ನಾಯಕನಿಗೆ ಏನು ಹೇಳುವುದು ಅಂತ ಗೊತ್ತಾಗುವುದಿಲ್ಲ. ಇಲ್ಲಿ ನೋಡಿದರೆ ಮದುವೆ ಫಿಕ್ಸ್ ಆಗಿದೆ, ತಂಗಿ ನೋಡಿದರೆ ಮದುವೆಗೂ ಮೊದಲೇ ಪ್ರೆಗ್ನೆಂಟ್... ನಾಯಕನಿಗೆ ಮತ್ತಷ್ಟು ಷಾಕ್ ಆಗುವುದು ಆಕೆಗೆ ಈ ಗರ್ಭಕ್ಕೆ ಕಾರಣ ಯಾರು ಅಂತಲೇ ಗೊತ್ತಿಲ್ಲ ಎಂದಾಗ !!! ಒಬ್ಬ ಹೆಣ್ಣು ತನಗೆ ಅರಿವಿಲ್ಲದೇ ಗರ್ಭಿಣಿಯಾಗಲು ಹೇಗೆ ಸಾಧ್ಯ ಅಂತ ನಾಯಕ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾನೆ. ಕಡೆಗೆ ಈ ವಿಷಯವನ್ನು ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗನ ಬಳಿ ಮುಚ್ಚುಮರೆಯಿಲ್ಲದೇ ಹೇಳಿ, ಆ ಹುಡುಗನ ಒಪ್ಪಿಗೆ ಮೇರೆಗೆ ತಂಗಿಗೆ ಅಬಾರ್ಷನ್ ಮಾಡಿಸಿ, ಅದೇ ಮುಹೂರ್ತದಲ್ಲಿ ಅದೇ ಹುಡುಗನೊಂದಿಗೆ ಮದುವೆ ಮಾಡಿ ಕಳಿಸುತ್ತಾನೆ. ತಂಗಿಯ ಗಂಡ ದೊಡ್ಡ ಮನಸ್ಸಿನಿಂದ ಇದೆಲ್ಲವನ್ನೂ ಕ್ಷಮಿಸುತ್ತಾನೆ. ತಂಗಿ ಅತ್ತ ಹೋದ ಕೂಡಲೇ ಇದಕ್ಕೆ ಯಾರು ಕಾರಣ ಅಂತ ಹುಡುಕಲು ತೊಡಗುತ್ತ...

"Imaikka Nodigal" (ತಮಿಳು)

Image
  ಕಣ್ಣು ಮಿಟುಕಿಸದೇ ಈ ಸಿನೆಮಾ ನೋಡಿ! ಹೌದು.. ಸಿನೆಮಾದ ಕಥೆಯೇ ಹಾಗಿದೆ. ಒಂದಲ್ಲ ಎರಡಲ್ಲ.... ಸಿನೆಮಾ ಪೂರ್ತಿ ಟ್ವಿಸ್ಟೋ ಟ್ವಿಸ್ಟು. ಅವನು ವಿಲನ್... ಅಲ್ಲಲ್ಲ ಇವನು.. ಅಯ್ಯೋ ಇವನಲ್ಲ ಅವನೇ ವಿಲನ್ ಅಂತ ಕೊನೆವರೆಗೂ ಈ 'ವಿಲನ್' ಯಾರು ಅನ್ನೋ ನಿರ್ಧಾರಕ್ಕೆ ಬರಲಾಗದೇ ಉಗುರು ಕಚ್ಚುತ್ತಾ ಮುಂದೇನು ಅಂತ ನೋಡುವಂತಾಗುತ್ತದೆ. ಕಥೆ ಏನು ಅಂದ್ರಾ? ಇದು ಸಹ ಮಾಮೂಲಿ ಸೀರಿಯಲ್ ಕಿಲ್ಲರ್ ಕೇಸ್. ಕಥೆ ನಡೆಯುವುದು ಬೆಂಗಳೂರಿನಲ್ಲಿ. ಖಳನಾಯಕನ ಹೆಸರು "ರುದ್ರ". ದೊಡ್ಡ ಮನುಷ್ಯರ ಮಕ್ಕಳನ್ನ ಕಿಡ್ನಾಪ್ ಮಾಡುವುದು, ಅವರ ಬಿಡುಗಡೆಗೆ ಹಣ ಕೇಳುವುದು, ಹಣ ಪಡೆಯುವುದು ಮಾಡುತ್ತಿರುತ್ತಾನೆ. ಆದರೆ ಹಣ ಪಡೆದ ಮೇಲೆ ಕಿಡ್ನಾಪ್ ಮಾಡಿದವರನ್ನು ಬಿಡುಗಡೆ ಮಾಡದೇ ಸಾಯಿಸುತ್ತಿರುತ್ತಾನೆ. ಇದು ರುದ್ರನ ಸ್ಪೆಷಾಲಿಟಿ. ಆದರೆ ಇದೇ ರೀತಿಯ ಸೀರಿಯಲ್ ಕಿಲ್ಲರ್ ಆಗಿದ್ದ ರುದ್ರ ಎಂಬ ವ್ಯಕ್ತಿಯನ್ನು ನಾಯಕಿ ಕಂ ಸಿಬಿಐ ಅಧಿಕಾರಿ ಆಗಿರುವ ಅಂಜಲಿ ನಾಲ್ಕು ವರ್ಷದ ಕೆಳಗೇ ಎನ್ಕೌಂಟರ್ ಮಾಡಿ ಸಾಯಿಸಿರುತ್ತಾಳೆ. ಅಂದ್ಮೇಲೆ "ರುದ್ರ" ಮತ್ತೆ ಹೇಗೆ ಬದುಕಿ ಬರಲು ಸಾಧ್ಯ? ಇಲ್ಲಿ ಬೇರೇನೋ ಇದೆ ಅಂತ ಯೋಚಿಸುವಷ್ಟರಲ್ಲಿ ಆ ರುದ್ರನಿಂದ ಮತ್ತೊಂದು ಕಿಡ್ನಾಪಿಂಗ್ ಮತ್ತು ಕೊಲೆ ನಡೆಯುತ್ತದೆ. ಈ ಬಾರಿ ರುದ್ರ ಅಂಜಲಿಗೇ ನೇರ ಚಾಲೆಂಜ್ ಹಾಕಿ ತಾಕತ್ತಿದ್ದರೆ ಅದನ್ನು ತಡೆಯಲು ಹೇಳಿರುತ್ತಾನೆ. ಆದರೂ ಅಂಜಲಿ ವಿಫಲಳಾಗುತ್ತಾಳೆ. ಮತ್ತೊಂದ...