Posts

The Last Color (ಹಿಂದಿ)

Image
  ಸದಾಕಾಲವೂ ಜಾತಿ, ಮೀಸಲಾತಿ, ರಾಜಕೀಯ ಎಂಬ ವಿಷಯಗಳ ಬಗ್ಗೆ ಪರ ಅಥವಾ ವಿರೋಧ ಮಾಡುತ್ತಿರುವ ಜನರು ಸಮಾಜದ ಮತ್ತೊಂದು ಶೋಷಿತರ ವರ್ಗವನ್ನು ಮರೆತೇ ಬಿಟ್ಟಿದ್ದಾರೆ. ಈ ಶೋಷಿತರುಗಳಿಗೆ ದನಿಯಾಗುವವರು ಯಾರಿಲ್ಲ, ಇವರುಗಳಿಗೆ ಯಾರ ಆಸರೆಯೂ ಇಲ್ಲ, ಯಾರ ಸಹಾಯಹಸ್ತವೂ ಇಲ್ಲ.... ಇವರುಗಳದ್ದು ಕೇವಲ ಮೂಕರೋಧನೆಯಷ್ಟೇ.. ಹಾಗಿದ್ದರೆ ಯಾರಿವರು? ಇವರು ಯಾರೆಂದು ಹೇಗೆ ಹೇಳಲಿ? ಇವರುಗಳ ಬಗ್ಗೆ ಏನೆಂದು ಬರೆಯಲಿ? ಇವರುಗಳು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಆದರೆ ನಮಗೆ ಇವರುಗಳನ್ನು ಕಂಡರೆ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಏಕೆಂದರೆ ಇವರುಗಳು ಹೀಗೇ ಇರಬೇಕು ಎಂಬ ಕಟ್ಟುಪಾಡು ಮಾಡಿರುವವರು ನಾವೇ. ಅವರು ಹಾಗೇ ಇರಬೇಕಷ್ಟೇ... ಅದನ್ನು ಅವರು ಮೀರಿದಾಗ ಮಾತ್ರವೇ ನಮ್ಮ ದೃಷ್ಟಿ ಅವರತ್ತ ಹರಿಯುತ್ತದೆ. ಈ ಸಿನೆಮಾದಲ್ಲಿ ಮೂರು ಮುಖ್ಯ ಪಾತ್ರಗಳಿವೆ.‌ 1) ಹುಟ್ಟಿಸಿದವರು ಯಾರೆಂದೇ ಗೊತ್ತಿಲ್ಲದಿದ್ದರೂ, ತುತ್ತು ಅನ್ನಕ್ಕೂ ತತ್ವಾರವಾಗಿದ್ದರೂ, ಸಮಾಜದ ಜನರಿಂದ 'ಅಸ್ಪೃಶ್ಯ' ಎಂಬ ಬಿರುದು ಪಡೆದಿದ್ದರೂ, ತಾನು ಓದಲೇಬೇಕೆಂದು ಹಠದಿಂದ ಸ್ಕೂಲ್ ಫೀಸಿಗಾಗಿ ಕಷ್ಟ ಪಡುತ್ತಿರುವ 'ಚೋಟಿ' ಎಂಬ ಒಂಭತ್ತರ ಬಾಲಕಿ. 2) ಇಷ್ಟವಿಲ್ಲದ ಮುದುಕನೊಂದಿಗೆ ಮದುವೆಯಾಗಿ, ಜೀವನ ಏನು ಅಂತ ಗೊತ್ತಾಗುವಷ್ಟರಲ್ಲಿ ಆತ ಸತ್ತು, 'ವಿಧವೆ' ಎಂಬ ಹಣೆಪಟ್ಟಿ ಅಂಟಿಸಿಕೊಂಡು, ಜೀವನದ ಸುಖಭೋಗಗಳಿಂದ ವಂಚಿತಳಾಗಿ, ಇಷ್ಟವಿಲ್ಲದ ಜೀವನ ನಡೆಸುತ್ತ ಇರುವ '...

Train to Busan (ಕೊರಿಯನ್)

Image
ಮನುಷ್ಯ ಭೂಮಿಯ ಮೇಲೆ ಹುಟ್ಟುವುದೇ ಸಾಯುವುದಕ್ಕಾಗಿ. ಆದರೆ ಸಾಯುವ ಮೊದಲಿನ ತನ್ನ ಜೀವನಕ್ಕಾಗಿ ಬಹಳಷ್ಟು ಹೋರಾಟ ಮಾಡುತ್ತಾನೆ. ಕಣ್ಣೆದುರಿಗೆ ಸಾವಿನ ನರ್ತನವನ್ನೇ ಕಂಡರೂ, ತಾನು ಮಾತ್ರ ಬದುಕುತ್ತೇನೆ ಎಂಬ ಆಶಾಭಾವದಿಂದ ಇರುತ್ತಾನೆ.‌ ಆ ಹೋರಾಟ ಯಾವ ಮಟ್ಟದಲ್ಲಿರುತ್ತದೆ ಅಂತ ತಿಳಿಯಬೇಕೆಂದರೆ ಈ ಸಿನೆಮಾ ನೋಡಬೇಕು. ಸುತ್ತಲೂ ರಾಶಿ-ರಾಶಿ ಹೆಣಗಳು....!!! ಹೆಣಗಳು..? ಅವು ಸತ್ತರೂ ಸಾಯುತ್ತಿಲ್ಲ. ಆದರೂ ಸತ್ತಿವೆ.. ಆದರೂ ಸಹ ಓಡಾಡುತ್ತಿವೆ.. ಓಹ್ ಗಾಡ್!! ನಾನೇನು ಹೇಳ್ತಾ ಇದ್ದೀನಿ ಅಂತ ಅರ್ಥ ಆಗಲಿಲ್ವಾ? ಸಿನೆಮಾ ನೋಡಿದರೆ ಅರ್ಥವಾಗುತ್ತದೆ. ಏಕೆಂದರೆ ಇದು ಹಾರರ್ ಸಿನೆಮಾ. ಹಾರರ್ ಎಂದರೆ ದೆವ್ವ ಅಲ್ಲ‌.. ಆದರೆ ಹೆದರಿಸಿ, ಬೆಚ್ಚಿ ಬೀಳಿಸುವುದರಲ್ಲಿ ಯಾವ ದೆವ್ವದ ಸಿನೆಮಾಗೂ ಕಡಿಮೆಯಿಲ್ಲ. ಸಿನೆಮಾ ನೋಡುತ್ತಾ ನೋಡುತ್ತಾ ಸೀಟಿನ ತುದಿಗೆ ಬಂದು ಬೀಳುವುದೊಂದು ಬಾಕಿ... ಅಷ್ಟು ಕಾತುರತೆ, ಗಾಬರಿ ಹುಟ್ಟಿಸುತ್ತದೆ ಈ ಸಿನೆಮಾ. ಅವರು ಯಾರೋ ನಮಗೆ ಗೊತ್ತಿಲ್ಲ. ನಮ್ಮ ದೇಶದವರೂ ಅಲ್ಲ. ಆದರೂ ಅವರೆಲ್ಲರೂ ಪ್ರಾಣದಿಂದ ಉಳಿಯಲಿ ದೇವರೇ ಅಂತ ನಾವೂ ಬೇಡಿಕೊಳ್ಳುವಂತಾಗುತ್ತದೆ. ಆದರೆ ಅವರು ಉಳಿಯುವುದು ನಿರ್ದೇಶಕರಿಗೆ ಇಷ್ಟವಿಲ್ಲವಲ್ಲ. ಹಾಗಾಗಿ ನಮ್ಮ ಪ್ರಾರ್ಥನೆ ದೇವರವರೆಗೂ ತಲುಪುವುದೇ ಇಲ್ಲ. ಅದೆಲ್ಲಾ ಸರಿ... ಯಾರು ಯಾಕೆ ಸಾಯ್ತಿದ್ದಾರೆ... ಯಾರೋ ಯಾಕೆ ಬದುಕಬೇಕು... ಅಂತ ಕನ್ಫ್ಯೂಸ್ ಆಯ್ತಾ? ದೇಶದಲ್ಲಿ ದಿಢೀರನೆ ಒಂದು ಭಯಾನಕ ಘಟನೆ ನಡೆಯ...

Drishyam 2 (ಮಲಯಾಳಂ)

Image
  ಅವನು ಜಾರ್ಜ್ ಕುಟ್ಟಿ.... ಅಲ್ಲಲ್ಲ ಅದಕ್ಕಿಂತ ಮುಂಚೆ ಅವನೊಬ್ಬ ಅಪ್ಪ. ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ಧೀರ. ಏನೇ ಸಂಕಟ ಎದುರಾದರೂ ಧೈರ್ಯಗೆಡದೇ ಆತ ನಿಂತು ಮಾಡುವ ಹೋರಾಟ ಎಲ್ಲರಿಗೂ ಸ್ಫೂರ್ತಿ ತುಂಬುವಂಥಹದ್ದು. ಏಕೆಂದರೆ.... ನಮಗೆಲ್ಲರಿಗೂ ಸಹ ನಮ್ಮ ಕುಟುಂಬವೇ ಮುಖ್ಯವಲ್ಲವೇ? ದೃಶ್ಯಂ-1 ಸಿನೆಮಾ ಎಲ್ಲರಿಗೂ ಗೊತ್ತು. ಇದರ ಬಗ್ಗೆ ಗೊತ್ತಿಲ್ಲದೇ ಇರುವವರೇ ಇಲ್ಲ ಎನ್ನುವಷ್ಟು ಫೇಮಸ್ ಆದ ಕಥೆ ಇದು. ಈ ಸಿನೆಮಾ ಅಂದರೆ ದೃಶ್ಯಂ-2 ಅದರ ಮುಂದುವರೆದ ಭಾಗ. ಆದರೆ ಇದರಲ್ಲಿ ಆಫ್ಟರ್ ಎಫೆಕ್ಟ್ಸ್ ತೋರಿಸಿದ್ದಾರೆ. ಆತುರದಲ್ಲಿ ಕ್ರೈಮ್ ಮಾಡುವುದು, ನಂತರ ಚತುರತೆಯಿಂದ ತಪ್ಪಿಸಿಕೊಳ್ಳುವುದು ಸುಲಭ. ಆದರೆ ನಂತರ ವರ್ಷಾನುಗಟ್ಟಲೆ ಆ ನೆನಪು ಮತ್ತು ಅದರ ಹ್ಯಾಂಗೋವರ್ ನಿಂದ ಹೊರ ಬರುವುದು ಬಹಳ‌ವೇ ಕಷ್ಟ. ಜಾರ್ಜ್ ಕುಟ್ಟಿಯು ತನ್ನ ಸಮಯಸ್ಫೂರ್ತಿಯಿಂದ ಕೊಲೆಯ ಆಪಾದನೆಯಿಂದ ತನ್ನ ಕುಟುಂಬದವರನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ನಂತರ ಕುಟುಂಬದ ಸದಸ್ಯರು ಅಂದಿನ ನೆನಪಿನಿಂದ ಹೊರಬರಲಾಗದೇ ಒಳಗೊಳಗೇ ನರಳುತ್ತಿರುತ್ತಾರೆ. ಅವನ ಮೊದಲ ಮಗಳಂತೂ ಮನಸ್ಸಿಗೆ ಸಂಪೂರ್ಣ ಹಚ್ಚಿಕೊಂಡು ಕೊರಗುತ್ತಿರುತ್ತಾಳೆ. ಹೇಗಾದರೂ ಮಾಡಿ ಜಾರ್ಜ್ ಕುಟ್ಟಿಯು ತನ್ನ ಮಗಳನ್ನು ಆ ನೆನಪುಗಳಿಂದ ಮುಕ್ತಗೊಳಿಸಬೇಕೆಂದು ಕಷ್ಟ ಪಡುತ್ತಿರುವಾಗ, ಅಕಸ್ಮಾತ್ತಾಗಿ ಆತ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ ಜಾಗ ಪೊಲೀಸರಿಗೆ ಗೊತ್ತಾಗಿಬಿಡುತ್ತದೆ. ಕೇಸ್ ಮತ್ತೆ ರೀ-...

Freedom @ Midnight (short movie)

Image
  ಸುಂದರವಾದ ಹೆಂಡತಿ ಪಕ್ಕದಲ್ಲಿದ್ದಾಳೆ. ತನ್ನನ್ನು ತಾನು ಎಷ್ಟು ಚೆನ್ನಾಗಿ ಸಿಂಗರಿಸಿಕೊಂಡಿದ್ದಾಳೆ. ಸುತ್ತಲೂ ತಂಪಾದ ವಾತಾವರಣವಿದೆ. ಹೊರಗೆ ಜಿಟಿಜಿಟಿ ಅಂತ ಮಳೆ ಬೀಳುತ್ತಿದೆ. ಆದರೆ ಗಂಡನಿಗೆ ಇಂತಹಾ ಸಮಯದಲ್ಲಿ ಶ್ಯಾವಿಗೆ ತಿನ್ನಬೇಕು ಅಂತನ್ನಿಸುತ್ತದೆ.  ಅರಸಿಕ ಮಹಾಶಯ ಅಂತ ಬೈದುಕೊಳ್ತೀವಿ ನಾವು. ಅಂಥವನನ್ನು ಪ್ರೇಮಿಸಿ ಮದುವೆಯಾದವಳು ಅವಳು‌. ಪ್ರೇಮಿಸುವಾಗ ಅವಳ ಬಗ್ಗೆ ಇದ್ದ ಕಾಳಜಿ ಈಗವನಿಗೆ ಇಲ್ಲ. ಆ ವ್ಯತ್ಯಾಸ ಅವನಿಗೆ ಗೊತ್ತಾಗುತ್ತಿಲ್ಲ. ಆದರೆ ಅವಳಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಹಾಗಾಗಿಯೇ ಪ್ರತೀದಿನವೂ ಏನೋ ಒಂದು ನಿರ್ಧಾರ ಮಾಡಿಕೊಳ್ಳುತ್ತಾಳೆ. ಅವಳು ತನ್ನ ಗಂಡನ ಬಳಿ "ಏನೋ" ಕೇಳಬೇಕು. ಅದನ್ನು ಪ್ರತೀದಿನ ಮನದಲ್ಲಿಯೇ ಉರು ಹೊಡೆಯುತ್ತಾ, ಅಭ್ಯಾಸ ಮಾಡಿಕೊಳ್ಳುತ್ತಾಳೆ. ಕೊನೆಗೆ ಯಾವುದೋ ಧೈರ್ಯ ಮಾಡಿಕೊಂಡು ಗಂಡನ ಬಳಿ ಹೋಗಿ ನಿಲ್ಲುತ್ತಾಳೆ. ಆದರೆ ಗಂಡ....????  ಅವನು ತನ್ನ ಪೂರ್ವಾಗ್ರಹಗಳಲ್ಲಿಯೇ ಇದ್ದಾನೆ ಹೊರತೂ ಹೆಂಡತಿಯ ಮನದ ಮಾತು ಆತನಿಗೆ ಬೇಕಿಲ್ಲ. ಆಕೆ 'ಏನೋ ಹೇಳಬೇಕು' ಅಂದಾಗ 'ಪ್ಲಂಬರ್ ವಿಷಯ ತಾನೇ? ಕರೆಸ್ತೀನಿ ಬಿಡು' ಅನ್ನುವಷ್ಟು ನಿರ್ಲಕ್ಷ್ಯ ಆತನಿಗೆ. ಹಾಗಾಗಿ ಅವನಿಗೆ ನೇರವಾಗಿ ಇರುವ ವಿಷಯ ಹೇಳದೇ ಸುತ್ತಿ-ಬಳಸಿ ಹೇಳಿ ಷಾಕ್ ಕೊಡಬೇಕೆಂದು ಆಕೆ ತೀರ್ಮಾನಿಸುತ್ತಾಳೆ.  "ನೀವು ಹೆಂಗಸರು ಯಾಕೆ ನೇರವಾಗಿ ಮಾತನಾಡೋಲ್ಲ... ಯಾಕೆ ಎಲ್ಲವನ್ನೂ ಸುತ್ತಿ ಬಳಸಿ ಮಾತನ...

Puthiya Niyamam (ಮಲಯಾಳಂ)

Image
  ನಿಮ್ಮ ಬಳಿ ಬಹಳಷ್ಟು ಸಮಯವಿದ್ದರೆ, ನಿಮ್ಮ ಮನಸ್ಸು ಪ್ರಶಾಂತವಾಗಿದ್ದರೆ, ಯಾವುದೇ ರೀತಿಯ ಅವಸರ ಇಲ್ಲದೇ ಒಂದು ತಣ್ಣನೆಯ ಕ್ರೈಂ ವಿರುದ್ಧ ಹೆಣ್ಣೊಬ್ಬಳು ಸೇಡು ತೀರಿಸಿಕೊಳ್ಳುವ ಬಗ್ಗೆ ನೋಡುವ ಆಸಕ್ತಿ ಇದ್ದರೆ, ನಿಜ ಜೀವನದ ಘಟನೆಗಳಂತೆ ಇರುವ ಚಿತ್ರದ ಸಹಜವಾದ ಹರಿವನ್ನು ಸಹಿಸಬಲ್ಲವರಾದರೆ ಈ ಚಿತ್ರ ನೋಡಿ.  ನಾನು ನೆಗೇಟಿವ್ ಆಗಿ ಹೇಳುತ್ತಿಲ್ಲ. ಇದು ಫ್ಯಾಕ್ಟ್! ಏಕೆಂದರೆ ಇದರಲ್ಲಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ರಕ್ಕಸಿಯಂತೆ ಅಬ್ಬರಿಸುವುದಿಲ್ಲ... ದೊಡ್ಡ ಮೇಧಾವಿಯಂತೆ ಅವರನ್ನು ಸಂಹರಿಸಲು ದೊಡ್ಡ-ದೊಡ್ಡ ಪ್ಲಾನ್ ಮಾಡೋಲ್ಲ.. ಕಾರು ಉಡಾಯಿಸೋದು, ಬಾಂಬ್ ಬಿಸಾಕುವುದು, ಚೇಸಿಂಗ್ ಸೀನುಗಳು ಇಲ್ಲವೇ ಇಲ್ಲ... ನಾಯಕಿಯ ರಕ್ಷಣೆಗೆ ದೇವರು ಅವತರಿಸಿ ಬರುವುದೂ ಇಲ್ಲ..  ಏಕೆಂದರೆ ನಿಜ ಜೀವನದಲ್ಲಿ ಇದು ಯಾವುದೂ ನಡೆಯೋಲ್ಲ! ನಾಯಕಿ ನಮ್ಮ-ನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ಹೆಣ್ಣು. ಅವಳಲ್ಲಿ ಇರುವುದು ಸಾಧಾರಣ ಬುದ್ಧಿಮತ್ತೆ ಅಷ್ಟೇ. ಆಕೆಯೊಳಗಿರುವ ಒಂದು ಕಲೆ ಎಂದರೆ ಕಥಕ್ಕಳಿ. ಅದೊಂದನ್ನು ಆಕೆ ಕಲಿತಿರುವುದನ್ನು ಬಿಟ್ಟರೆ ಗಂಡ ಮತ್ತು ಮಗಳ ಜೊತೆ ಸಾಮಾನ್ಯ ಜೀವನ ನಡೆಸುತ್ತಾ, ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಇದ್ದುಬಿಟ್ಟಿರುತ್ತಾಳೆ.  ಆಗೊಂದು ದುರ್ಘಟನೆ ನಡೆಯುತ್ತದೆ.  ಆಕೆ ಫ್ಲಾಟಿನ ಟೆರೇಸಿನ ಮೇಲೆ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ದಾಗ ಅದೇ ಫ್ಲಾಟಿನ ಇಬ್ಬರು ಯುವಕರು ಮತ್ತು ಇಸ್ತ್ರಿಯವನು ...

Ustad Hotel (ಮಲಯಾಳಂ)

Image
  ಈ ಸಿನೆಮಾದ ಪ್ರಕಾರವೇ ಹೇಳಬೇಕೆಂದರೆ.... "ಹೇಗೆ ಅಡುಗೆ ಮಾಡುವುದು ಅಂತ ತಿಳಿಯುವುದಕ್ಕೆ ಈ ಸಿನೆಮಾ ನೋಡಬೇಕಿಲ್ಲ. ಯಾರಿಗಾಗಿ ಅಡುಗೆ ಮಾಡಬೇಕು ಎಂದು ತಿಳಿಯಲು ಈ ಸಿನೆಮಾ ನೋಡಲೇಬೇಕು" ಸಿನೆಮಾ ಮುಗಿಯುವಷ್ಟರಲ್ಲಿ ನಮ್ಮಲ್ಲಿಯೂ ಒಂದು ಪಶ್ಚಾತ್ತಾಪದ ಅಲೆ ಎದ್ದಿರುತ್ತದೆ. ಕಣ್ಣಂಚು ಒದ್ದೆಯಾಗಿರುತ್ತದೆ. ಒಂದೆರೆಡು ಹನಿ ಕಣ್ಣೀರು ಜಾರಿರುತ್ತದೆ. ಹೃದಯ ಭಾರವಾಗಿರುತ್ತದೆ... ನಾಯಕನ ಜೊತೆ ನಾವೂ ಸಹ ಯಾರಿಗಾಗಿ ಅಡುಗೆ ಮಾಡಬೇಕು ಅಂತ ಕಲಿಯುತ್ತೇವೆ‌.  ಅಷ್ಟರಮಟ್ಟಿಗೆ ಈ ಸಿನೆಮಾ ಗೆದ್ದಿದೆ.  ಇಡೀ ಸಿನೆಮಾದಲ್ಲಿ ನಮ್ಮನ್ನು ಆಕರ್ಷಿಸುವುದು ನಾಯಕನಲ್ಲ, ನಾಯಕಿಯೂ ಅಲ್ಲ. ಬದಲಿಗೆ ನಾಯಕನ ತಾತ ಕರೀಂ ಅವರು. ಅವರ ಆಕ್ಟಿಂಗಿಗೆ ಫಿದಾ ಆಗಲೇಬೇಕು. ಮಂದ ಚಲನೆಯ ತಾಳ್ಮೆಯೇ ಮೈವೆತ್ತಂತಿರುವ ಕರೀಂ ಚಾಚಾ, ಪಾತ್ರದೊಳಗೆ ಆವರಿಸಿರುವ ಪರಿ ನನಗಂತೂ ಇಷ್ಟವಾಯ್ತು.  'ಉಸ್ತಾದ್ ಹೋಟೆಲ್' ಅಡುಗೆಯವರ ಕಥೆ. ಅಪ್ಪನಿಗೆ ಫೈವ್ ಸ್ಟಾರ್ ಹೋಟೆಲ್ ಮಾಡುವ ಆಸೆಯಾದರೆ, ಮಗನಿಗೆ ಅಡುಗೆಯವನಾಗುವ ಆಸೆ. ಇಬ್ಬರ ಆಸೆಗಳೂ ವಿರುದ್ಧವಾದ ಕಾರಣ ಅಪ್ಪ-ಮಗ ದೂರವಾಗುತ್ತಾರೆ. ಆದರೆ ಯಾವ ಕೆಲಸವೂ ಕೀಳಲ್ಲ. ಫೈವ್ ಸ್ಟಾರ್ ಹೋಟೆಲ್ ಓನರ್ ಆಗಬೇಕಾದವನು ಅಡುಗೆಯವನಾದ ಮಾತ್ರಕ್ಕೆ ಅವನ ಗೌರವಕ್ಕೆ ಕುಂದು ಬರುವುದಿಲ್ಲ. ಏಕೆಂದರೆ... ಎಲ್ಲ ಕೆಲಸಕ್ಕೂ ತನ್ನದೇ ಆದ ವೃತ್ತಿಗೌರವ ಇದ್ದೇ ಇರುತ್ತದೆ.  ಅಲ್ಲದೇ... ಮನಸ್ಸು ಬಯಸಿದ ಕೆಲಸ ಮಾಡುವುದರಲ್ಲಿನ ...

Ishq (ಮಲಯಾಳಂ) ಸಿನೆಮಾ ವಿಮರ್ಶೆ

Image
  Not a love story ಎನ್ನುವುದು ಇದರ ಟ್ಯಾಗ್ ಲೈನ್. ಆದರೆ ಸಿನೆಮಾ ಶುರುವಾಗುವುದು ಪ್ರೇಮಿಗಳಿಂದಲೇ. ಸಚ್ಚಿದಾನಂದ ಮತ್ತು ವಸುಧಾ ಇವರೇ ಪ್ರೇಮಿಗಳು. ವಯಸ್ಸಿನ ಆಕರ್ಷಣೆಯಂತೆ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಪ್ರೀತಿಸುವ ಎಲ್ಲರದ್ದೂ ಇದೇ ಕಥೆ ಅಲ್ಲವೇ? 'ಪ್ರೀತಿಸಲು ಕಾರಣ ಬೇಕಿಲ್ಲ, ಪ್ರೀತಿ ಹೇಗೆ ಹುಟ್ಟುತ್ತದೆಯೋ ಗೊತ್ತಾಗಲ್ಲ' ಅಂತೆಲ್ಲ ಹೇಳುತ್ತಾ ಪ್ರೇಮಿಗಳು ಪ್ರೀತಿಸುತ್ತಿರುತ್ತಾರೆ. ಆದರೆ ಅವರ ಪ್ರೀತಿಗೆ ಪರೀಕ್ಷೆ ಎದುರಾದಾಗಲೇ ತಾನೇ ಆ ಪ್ರೀತಿಯ ಗುಣಮಟ್ಟ ಗೊತ್ತಾಗುವುದು. ಆಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆಯೋ ಅಥವಾ ತಪ್ಪನ್ನು ಮತ್ತೊಬ್ಬರ ಮೇಲೆ ಎತ್ತಿ ಹಾಕಿ‌ ಆ ಪರಿಸ್ಥಿತಿಯಿಂದ ಪಾರಾಗಲು ನೋಡುತ್ತಾರೆಯೋ ಎನ್ನುವುದರ ಮೇಲೆ ಪ್ರೀತಿಯ ಪ್ರಾಮಾಣಿಕತೆ ನಿಂತಿದೆ. ಆದರೆ ಬಹಳಷ್ಟು ಪ್ರೇಮಿಗಳಿಗೆ ಇಂತಹ ಪರೀಕ್ಷೆಯ ಕಾಲ ಎದುರಾಗುವುದೇ ಇಲ್ಲ.... ನಮ್ಮ ಪ್ರೇಮಿಗಳ ವಿಷಯಕ್ಕೆ ಬಂದರೆ, ಸಚ್ಚಿ ಮತ್ತು ವಸುಧಾರಿಗೆ ಏಕಾಂತವಾಗಿ ಕಾಲ ಕಳೆಯಬೇಕಿದೆ. ಸಚ್ಚಿ ಕಾರು ತಂದು ಕರೆದಾಗ ಅವನು ಯಾವುದಕ್ಕೆ ಕರೆಯುತ್ತಿದ್ದಾನೆ ಅಂತ ಗೊತ್ತಿದ್ದೂ ಆಕೆ ಹೊರಡುತ್ತಾಳೆ. 'ಬರುವುದಿಲ್ಲ' ಎಂದರೆ ಪ್ರೀತಿಸುವುದನ್ನೇ ಬಿಟ್ಟುಬಿಟ್ಟಾನು ಎಂಬ ಭಯ ಇರಬಹುದು ಅಥವಾ ಏನಾಗುತ್ತೋ ನೋಡಿಯೇ ಬಿಡೋಣ ಎಂಬ ಹುಂಬ ಧೈರ್ಯವೂ ಇರಬಹುದು. ಮಧ್ಯರಾತ್ರಿಯಲ್ಲಿ ಕಾರು ಒಂದು ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲ...